ಹುಬ್ಬಳ್ಳಿ-ಧಾರವಾಡ ಸುದ್ದಿ

ದಾಖಲೆ ಇಲ್ಲದ 53 ಲಕ್ಷ ನಗದು ಜಪ್ತಿ!

ತೇಗೂರ ಚೆಕ್ ಪೋಸ್ಟನಲ್ಲಿ ಖಾಕಿ ಬೇಟೆ

ಧಾರವಾಡ: ಕಾರಿನಲ್ಲಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಗರಗ ಪೊಲೀಸರು, ಆತನಿಂದ ನಗದು ವಶಕ್ಕೆ ಪಡೆದ ಘಟನೆ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ತಾಲೂಕಿನ ಹೊಸತೇಗೂರ ಗ್ರಾಮದ ಬಳಿಯ ಚೆಕ್ ಪೊಸ್ಟ್‌ನಲ್ಲಿ ಗುರುವಾರ ನಡೆದಿದೆ.


ಸಂಜೀವ ಹಿರೇಮಠ ಎಂಬಾತನು ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಇನ್ನೋವಾ ಕಾರಿನಲ್ಲಿ ಹೊರಟಿದ್ದನು. ಕಾರಿನ ಡಿಕ್ಕಿಯಲ್ಲಿ 53 ಲಕ್ಷ ರೂ. ಹಣವನ್ನು ಸಾಗಿಸುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಚೆಕ್ ಪೊಸ್ಟ್ ನಲ್ಲಿ ತಡೆದು ಹಣ ವಶಕ್ಕೆ ಪಡೆದು ಆತನನ್ನು ಠಾಣೆಗೆ ಕರೆ ತಂದಿದ್ದರು.


ನಂತರ ಠಾಣಾ ಜಾಮೀನಿನ ಮೇಲೆ ಆತನನ್ನು ಬಿಡಲಾಗಿದ್ದು, ಹಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡುವಂತೆ ಗರಗ ಠಾಣಾ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದಾಗಿ ತಿಳಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *