ಹುಬ್ಬಳ್ಳಿ-ಧಾರವಾಡ ಸುದ್ದಿ

ತಂದೆ ವಿನಯ ಕುಲಕರ್ಣಿ ಪರ ಅಖಾಡಕ್ಕಿಳಿದ ವೈಶಾಲಿ

ಧಾರವಾಡ: ತಂದೆಯ ವಿನಯ್ ಕುಲಕರ್ಣಿ ಅನುಪಸ್ಥಿತಿಯಲ್ಲಿ ಪ್ರಚಾರದಲ್ಲಿ ತೊಡಗಿರುವ ಪುತ್ರಿ ವೈಶಾಲಿ ಕುಲಕರ್ಣಿಗೆ ಕ್ಷೇತ್ರದಲ್ಲಿ ಮತದಾರರಿಂದ ಅಭಯ ಸಿಗುತ್ತಿದೆ.
ನೀವು ಇವತ್ತ ನಮ್ಮ ಮನಿ ಬಾಗಿಲಿಗಿ ಬಂದೀರಿ, ನಿಮ್ಮ ಅಪ್ಪಾರ ಬಂದಿದ್ದಕ್ಕಿಂತ ಹೆಚ್ಚಾತು ನಾವು ನಿಮಗ ವೋಟ್ ಹಾಕ್ತೇವಿ ಚಿಂತಿ ಮಾಡಬ್ಯಾಡ್ರಿ ಎಂಬ ಅಭಯ ಪ್ರಚಾರ ಸಂದರ್ಭದಲ್ಲಿ ವೈಶಾಲಿಗೆ ಸಿಗುತ್ತಿದೆ.


ವಿನಯ ಅವರ ಅನುಪಸ್ಥಿತಿಯಲ್ಲಿ ಪುತ್ರಿ ವೈಶಾಲಿ ತಾಲೂಕಿನ ತಲವಾಯಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಹಿರಿಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತ ರೊಂದಿಗೆ ಮನೆ, ಮನೆಗೆ ತೆರಳಿ ಕರಪತ್ರ ನೀಡಿ ತಮ್ಮ ತಂದೆ ವಿನಯ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ವೈಶಾಲಿ ಅವರು ತಲವಾಯಿ ಗ್ರಾಮದ ಮನೆಯೊಂದಕ್ಕೆ ಹೋಗಿ ನಮ್ಮ ತಂದೆಯವರು ಬರಲು ಆಗಿಲ್ಲ ಅದಕ್ಕೆ ನಾವೇ ಬಂದು ಮತ ಕೇಳುತ್ತಿದ್ದೇವೆ ನಮಗೆ ಮತ ನೀಡಿ ಎಂದು ಮನವಿ ಮಾಡಿದರು. ಮಹಿಳೆಯೊಬ್ಬರು ನಿಮ್ಮ ತಂದೆ ಬಂದಿದ್ದಕ್ಕಿಂತ ಹೆಚ್ಚಾಯ್ತು ನಾವು ನಿಮಗೇ ಮತ ಹಾಕ್ತೀವಿ ಅಂತಾ ಅಭಯ ನೀಡಿದರು.


ಈ ಬಾರಿ ನಮ್ಮ ತಂದೆ 50 ಸಾವಿರ ಮತಗಳ ಅಂತರದಿಂದ ಗೆಲ್ಲುವದರಲ್ಲಿ ಯಾವುದೇ ಸಂದೇಹವಿಲ್ಲ. ನಾವು ಹೋದ ಕಡೆಗಳಲ್ಲೆಲ್ಲ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದರು. ಒಟ್ಟಾರೆ ವೈಶಾಲಿ ಕೂಡ ತಮ್ಮ ತಂದೆ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದು, ಅವರಿಗೂ ಉತ್ತಮ ಜನ ಸ್ಪಂದನೆ ವ್ಯಕ್ತವಾಗಿದೆ.

 

administrator

Related Articles

Leave a Reply

Your email address will not be published. Required fields are marked *