ಹುಬ್ಬಳ್ಳಿ-ಧಾರವಾಡ ಸುದ್ದಿ

ಸೆಂಟ್ರಲ್ ತುಂಬಾ ಕಮಲದ ಹವಾ: ಮಹೇಶ

ಹುಬ್ಬಳ್ಳಿ : ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷದ ಚುನಾವಣಾ ಪ್ರಚಾರಾರ್ಥ ತಾವು ಇಡೀ ಶಹರವನ್ನು ಸುತ್ತಿದ್ದು ಎಲ್ಲೆಡೆ ಬಿಜೆಪಿ ಪರವಾದ ಭಾರೀ ಅಲೆ ಕಾಣಿಸುತ್ತಿದೆ.ಬಿಜೆಪಿ ಗೆಲುವು ದೊಡ್ಡದಾಗಬೇಕು. ಗೆಲುವಿನ ಅಂತರ ಹೆಚ್ಚಿ ಇಡೀ ದೇಶ ಮೆಚ್ಚಬೇಕು ಎಂದು ಮಹೇಶ ಟೆಂಗಿನಕಾಯಿ ಹೇಳಿದರು.
ಸೆಂಟ್ರಲ್ ಬಿಜೆಪಿ ಅಭ್ಯರ್ಥಿ ಭೈರಿದೇವರಕೊಪ್ಪದ ಶಾಂತಿನಿಕೇತನ ಬಡಾವಣೆ,ವೀರ ಸಂಗೋಳ್ಳಿ ರಾಯಣ್ಣ ನಗರ ಮುಂತಾದೆಡೆ ಮತ ಯಾಚಿಸಿ ಮಾತನಾಡಿದರು.

ರಾಜ್ಯದಲ್ಲಿ ಬಿಜಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಶ್ವಾಸನೆ ನೀಡಿದಂತೆ ಹುಧಾ ಸೆಂಟ್ರಲ್‌ಕ್ಷೇತ್ರಕ್ಕೆ ಹಚ್ಚಿನ ಅನುದಾನ ಸಿಗಲಿದೆ. ನಗರದ ಸಮಸ್ಯೆಗಳು ಶೀಘ್ರದಲ್ಲಿ ಪರಿಹಾರಗೊಳ್ಳಲಿವೆ ಎಂದರು.

ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ವಿಜಯಕುಮಾರ ಶೆಟ್ಟಿ, ಎಸ್.ಎಚ್.ಹುರಳಿ, ನಾಗೇಶ ಮಾನೆ, ಗಜಾನನ ಕಾಮತ, ಸಚಿನ ಚವ್ಹಾಣ, ನಿಖಿತ ಶೆಟ್ಟಿ, ಮುತ್ತು ಹೆಬ್ಬಳ್ಳಿ, ವೇದಾ ಜೋಶಿ, ಕಮಲಾ ಮುಧೋಳ, ಅನುಶ್ರೀ ಕೋಣನತಂಬಗಿ,ಉಳವಣ್ಣವರ, ಶಿವಣ್ಣ, ಆರ್.ಜಿ.ಕುಲಕರ್ಣಿ, ಎಂ.ಆರ್.ಶೇಟ್, ಪಾಟೀಲ ಉಪಸ್ಥಿತರಿದ್ದರು.

 

administrator

Related Articles

Leave a Reply

Your email address will not be published. Required fields are marked *