ಹುಬ್ಬಳ್ಳಿ-ಧಾರವಾಡ ಸುದ್ದಿ

ಸಮಗ್ರ ಅಭಿವೃದ್ಧಿಗೆ ಲಾಡ್ ಬೆಂಬಲಿಸಿ

ಕ್ಷೇತ್ರಕ್ಕೆ ಹಣ, ಅಂತಸ್ಥಿಗಾಗಿ ಬಂದಿಲ್ಲ: ಲಾಡ್

ಕಲಘಟಗಿ : ಕಲಘಟಗಿ ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗಬೇಕೆಂದರೆ ಈ ಬಾರಿ ಸಂತೋಷ ಲಾಡ್ ಅವರಿಗೆ ಮತ ಹಾಕಿ ಆರಿಸಿ ತನ್ನಿ. ನಿಮ್ಮ ಕಷ್ಟದಲ್ಲಿ ಸದಾ ಭಾಗಿಯಾಗುತ್ತಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಹೇಳಿದರು.
ದೇವಿಕೊಪ್ಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈ ಕ್ಷೇತ್ರದ ಸವಾಂಗೀಣ ಅಭಿವೃದ್ಧಿ ಕನಸು ನನಸಾಗಿಸಲು ಮತ್ತೊಮ್ಮೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.


ಅಭ್ಯರ್ಥಿ ಸಂತೋಷ ಲಾಡ ಮಾತನಾಡಿ ಬಿಜೆಪಿ ಹಾಗೆ ಪ್ರಚಾರಕ್ಕೆ ಯಾವ ಹಿರೋ ಹಿರೋಯಿನ್‌ಗಳನ್ನು ಕರೆಸುವುದಿಲ್ಲ. ನೀವೆ ನಮ್ಮ ಸ್ಟಾರ್ ಎಂದು ಸಂತೋಷ ಲಾಡ್ ಜನರಿಗೆ ಹೇಳಿದರು. ಕಲಘಟಗಿ ಕ್ಷೇತ್ರ ಉದ್ದಾರ ಮಾಡುವ ಭರವಸೆಯಿದ್ದರೆ ಮಾತ್ರ ನನಗೆ ವೋಟ್ ಹಾಕಿ, ಇಲ್ಲಾ ಅಂದ್ರ ಬೇಡಾ ಎಂದು ಜನರಲ್ಲಿ ಮನವರಿಕೆ ಮಾಡಿದರು.


ಸಾವಿರಾರು ಜನರು ಸಂತೋಷ ಲಾಡ್ ಪರ ಜಯ ಘೋಷಣೆ ಹಾಕಿದರು. ಪರಿಷತ್ ಸದಸ್ಯ ಸಲೀಂಅಹ್ಮದ, ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ ಸೇರಿದಂತೆ ಸ್ಥಳೀಯ ಪ್ರಮುಖರು ಇದ್ದರು.

ಕ್ಷೇತ್ರಕ್ಕೆ ಹಣ, ಅಂತಸ್ಥಿಗಾಗಿ ಬಂದಿಲ್ಲ: ಲಾಡ್

ಕಲಘಟಗಿ: ’ನಾನು ಕಲಘಟಗಿ ಕ್ಷೇತ್ರಕ್ಕೆ ಹಣ, ಆಸ್ತಿ, ಅಂತಸ್ತು ಗಳಿಸಲು ಬಂದಿಲ್ಲ. ಜನರ ಸೇವೆ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಲು ಬಂದಿದ್ದೇನೆ. ಕ್ಷೇತ್ರದ ಜನ ನನ್ನನ್ನು ಕೈಹಿಡಿಯುತ್ತಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಹೇಳಿದರು.
ಮತಕ್ಷೇತ್ರದ ಹೊನ್ನಾಪುರ, ಕಂಬಾರಗಣವಿ, ಅರವಟಗಿ, ಕೋಗಿಲಗೇರಿ, ಕಾಶೆನಟ್ಟಿ, ಹುಲಿಕೇರಿ, ಕಡಬಗಟ್ಟಿ, ಬೆನಚಿ, ಡೋರಿ, ಅಂಬೋಳಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದರು.
“ಸಹಾಯ ಮಾಡುತ್ತೇನೆ ಅಂತಾ ನನಗೆ ಯಾರೂ ಮತ ಹಾಕಬೇಡಿ. ಯಾರು ನಿಮ್ಮ ಕೆಲಸ ಮಾಡಿದ್ದಾರೆ, ನೋಡಿ ಮತ ಚಲಾಯಿಸಿ, ಮತದಾರರು ನನ್ನನ್ನು ಹೊರಗಿನವನು ಎಂದು ಭಾವಿಸಿಲ್ಲ. ವಿರೋಧಿ ಬಣದವರು ನನ್ನ ಹೆಸರು ಕೆಡಿಸಿ ಮತ ಸೆಳೆಯಲು ಮಾಡುತ್ತಿರುವ ನಾಟಕ ಇದು ಎಂದರು.
ಅಳ್ಳಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಗೌಡ, ಕರಿಗೌಡರ, ಎಸ್.ಆರ್.ಪಾಟೀಲ, ಮಂಜುನಾಥ ಮುರಳ್ಳಿ, ಆನಂದ ಕಲಾಲ, ನರೇಶ ಮಲೆನಾಡು, ಕೃಷ್ಣಾ ಕೊಳ್ಳಾನಟ್ಟಿ, ಗುರು ಬೆಂಗೇರಿ ಇದರು.

 

 

administrator

Related Articles

Leave a Reply

Your email address will not be published. Required fields are marked *