ಹುಬ್ಬಳ್ಳಿ-ಧಾರವಾಡ ಸುದ್ದಿ

ಪೂರ್ವ ಅಭ್ಯರ್ಥಿ ಡಾ.ಕ್ರಾಂತಿಕಿರಣ ಜಾತಿ ’ಅಸಲಿಯತ್ತು’ ಬಹಿರಂಗಪಡಿಸಿ

ವಿವಿಧ ದಲಿತ ಮಹಾಮಂಡಳ ಆಗ್ರಹ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೂರ್ವ ಮಿಸಲು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಡಾ.ಕ್ರಾಂತಿಕಿರಣ ಅವರು ತಮ್ಮ ಜಾತಿ ಪ್ರಮಾಣ ಪತ್ರದ ವಿವರಗಳ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಹುಬ್ಬಳ್ಳಿ ಧಾರವಾಡ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಆಗ್ರಹಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಬಿಜೆಪಿ ಪೂರ್ವ ಮತ ಕ್ಷೇತ್ರದ ಬಿಜೆಪಿ ಪ್ರಮುಖ ನಾಯಕರು ಸತ್ಯವನ್ನು ಮರೆಮಾಚಿ, ಅಲ್ಲಿಯ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದರು.


ಡಿಸಿ, ಐಡಿಜಿಪಿ, ಪೊಲೀಸ್ ಆಯುಕ್ತರಿಗೆ ಮನವಿ ಸಹ ಸಲ್ಲಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ ಅವರು ಇದಕ್ಕೆ ಕೇವಲ ಒಂದೆ ಉತ್ತರ ನೀಡುತ್ತಿದ್ದಾರೆ. ಅದು ಆರ್‌ಡಿ ನಂಬರ್ ಪರಿಶೀಲಿಸಿ ಎಂದು ಕಾರಣ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಡಾ. ಕ್ರಾಂತಿಕಿರಣ ಅವರ ಇಬ್ಬರೂ ಮಕ್ಕಳ ಶಾಲಾ ದಾಖಲಾತಿಯಲ್ಲಿ ಹಿಂದೂ ಒಕ್ಕಲಿಗ ಎಂದು ಮಾಡಿಸಿದ್ದಾರೆ. ಈ ದಾಖಲೆ ಸಿಗದಂತೆ ಬಿಜೆಪಿ ನಾಯಕರು ಶಾಲಾ ಸಿಬ್ಬಂದಿ, ಡಿಡಿಪಿಐ ಅವರಿಗೆ ಒತ್ತಡ ಹಾಕುತ್ತಿದ್ದಾರೆಂದು ಆರೋಪಿಸಿದರಲ್ಲದೇ ಹುಬ್ಬಳ್ಳಿ ಧಾರವಾಡ ಮೀಸಲು ಕ್ಷೇತ್ರದಲ್ಲಿ ನಿಮ್ಮ ಅಭ್ಯರ್ಥಿಗೆ ನೀವೆ ನಕಲಿ ಜಾತಿ ಪತ್ರ ಕೊಡಿಸಿದ್ದಿರೋ ಅಥವಾ ಇದರಲ್ಲಿ ನಿಮ್ಮ ಕುತಂತ್ರವಿದೆಯೋ ಎಂದು ಸ್ಪಷ್ಟ ಪಡಿಸಬೇಕು ಎಂದರು.

ಈ ಪ್ರಕರಣ ಉನ್ನತ ಮಟ್ಟಿದ ತನಿಖೆಗೆ ಆಗ್ರಹಿಸಿದರಲ್ಲದೇ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದವರು ಪ್ರಕರಣ ಗಂಭೀರತೆ ಅರಿತು ಇಷ್ಟರಲ್ಲೇ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ ಎಂದರು.
ಬಿಜೆಪಿಯಲ್ಲಿರುವ ದಲಿತ ಮುಖಂಡರು ಎಚ್ಚೆತ್ತುಕೊಂಡು ಜಾಗೃತರಾಗಬೇಕು. ತಾವು ಮೋಸ ಹೋಗುತ್ತಿದ್ದಿರಿ. ನಿಮ್ಮ ಬಿಜೆಪಿ ನಾಯಕರು ನಿಮಗೆ ಮೋಸ ಮಾಡುತ್ತಿದ್ದಾರೆಂದರಲ್ಲದೇ, ಸಂವಿಧಾನ ಶಿಲ್ಪಿಯ ಅಭಿಮಾನಿಗಳು ಅಲ್ಲದೇ ಮೂಲ ದಲಿತರು ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಖೊಟ್ಟಿ ದಲಿತ ಅಭ್ಯರ್ಥಿಗೆ ಮತದಾನ ಮಾಡುವುದಿಲ್ಲವೆಂದು ನಿರ್ಣಯಿಸಿದ್ದಾರೆಂದರು. ಗೋಷ್ಠಿಯಲ್ಲಿ ಪ್ರಭು ಪ್ರಭಾಕರ, ಶ್ರೀನಿವಾಸ ಬೆಳದಡಿ, ದೇವೇಂದ್ರಪ್ಪ ಇಟಗಿ,ಶಾಂತರಾಜ ಪೋಳ ಮುಂತಾದವರು ಇದ್ದರು.

administrator

Related Articles

Leave a Reply

Your email address will not be published. Required fields are marked *