ಹುಬ್ಬಳ್ಳಿ-ಧಾರವಾಡ ಸುದ್ದಿ

ಪಶ್ಚಿಮದಲ್ಲಿ ಬೆಲ್ಲ ಸವಿದ ಬೆಲ್ಲದ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರ ಮತ್ತೊಮ್ಮೆ ಬಿಜೆಪಿಯ ಭದ್ರಕೋಟೆಯೆಂಬುದು ಮತ್ತೊಮ್ಮೆ ಸಾಭೀತುಪಡಿಸಿದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಹ್ಯಾಟ್ರಿಕ್ ಗೆಲುವನ್ನು ದಾಖಲು ಮಾಡಿದ್ದಾರೆ.


ಬೆಲ್ಲದ 26 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದು ಅಧಿಕೃತ ಗೆಲುವು ಘೋಷಣೆ ಬಾಕಿಯಿದೆ.
ಬೆಲ್ಲದ ಕಳೆದ ಎರಡು ಅವಧಿಯಲ್ಲಿ ಜನರೊಂದಿಗೆ ಹೊಂದಿದ್ದ ಉತ್ತಮ ಬಾಂಧವ್ಯ, ಅಭಿವೃದ್ಧಿ ಕೆಲಸಗಳು ಅವರನ್ನು ಪುನಃ ಕೈ ಹಿಡಿದಿವೆ.


ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಕಾಂಗ್ರೆಸ್ ಸಂಪ್ರದಾಯಿಕ ಮತಗಳು, ಅಹಿಂದ ಮತಗಳು ಕೈ ಹಿಡಿಯುವ ಲೆಕ್ಕಾಚಾರದಲ್ಲಿದ್ದರೂ ಯಶಸ್ವಿಯಾಗದೇ ಪರಾಭವಗೊಂಡಿದ್ದಾರೆ. ಬೆಲ್ಲದಗೆ ಲಿಂಗಾಯತ ಸಮುದಾಯದ ಉಳಿದ ಪಂಗಡಗಳು ಕೈಕೊಡಲಿವೆ ಎಂಬ ಲೆಕ್ಕಾಚಾರ ಹುಸಿಯಾಗಿದೆ.

administrator

Related Articles

Leave a Reply

Your email address will not be published. Required fields are marked *