ಹುಬ್ಬಳ್ಳಿ-ಧಾರವಾಡ ಸುದ್ದಿ

ಗುಪ್ತಾ ಜಾಗೆಗೆ ಮಾರ್ಟಿನ್, ವಂಶಿಕೃಷ್ಣ?

ಹುಬ್ಬಳ್ಳಿ: ಅವಳಿನಗರ ಪೊಲೀಸ್ ಆಯುಕ್ತರಾಗಿರುವ ರಮಣ ಗುಪ್ತಾ ಬೆಂಗಳೂರಿನ ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದು, ಅಲ್ಪಾವಧಿಯಲ್ಲೇ ಸದ್ದಿಲ್ಲದೇ ತಮ್ಮ ಖಡಕ್‌ತನದ ಬಿಸಿ ಮುಟ್ಟಿಸಿದ್ದ ಇವರ ಸ್ಥಾನಕ್ಕೆ ಯಾರನ್ನೂ ತೋರಿಸಿಲ್ಲವಾಗಿದ್ದು, ಮುಂದಿನ ಕಮೀಶ್ನರ್ ಯಾರು ಎಂಬ ಚರ್ಚೆ ಆರಂಭವಾಗಿದೆ.


ಈಗಾಗಲೇ ಹಿರಿಯ ಅಧಿಕಾರಿಗಳಾದ ಇಡಾ ಮಾರ್ಟಿನ್, ವಂಶಿ ಕೃಷ್ಣ, ತ್ಯಾಗರಾಜನ್ ಮುಂತಾದವರ ಹೆಸರುಗಳು ಅತ್ಯಂತ ಸೂಕ್ಷ್ಮ ಹಣೆಪಟ್ಟಿ ಹಚ್ಚಿಕೊಂಡಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರ ಹುದ್ದೆಗೆ ಕೇಳಿ ಬರುತ್ತಿದ್ದು ಯಾರು ಅಂತಿಮಗೊಳ್ಳುವರೆಂಬುದನ್ನು ಕಾದು ನೋಡಬೇಕಿದೆ.
ಮಾರ್ಟಿನ್ ಅಥವಾ ವಂಶಿ ಕೃಷ್ಣ ಇಬ್ಬರಲ್ಲೊಬ್ಬರು ನಿಯುಕ್ತಿಗೊಳ್ಳಬಹುದೆಂದು ಹೇಳಲಾಗುತ್ತಿದೆ.

administrator

Related Articles

Leave a Reply

Your email address will not be published. Required fields are marked *