ಹುಬ್ಬಳ್ಳಿ-ಧಾರವಾಡ ಸುದ್ದಿ

ನವಲೂರ ಬ್ರಿಡ್ಜ್ ಮೇಲೆ ಮಳೆ ನೀರು: ಸಂಚಾರಕ್ಕೆ ತೊಂದರೆ

 

ಧಾರವಾಡ: ಸಮೀಪದ ನವಲೂರ ಬ್ರಿಡ್ಜ್ ಮೇಲೆ ಮಳೆ ನೀರು ನಿಂತು ಶುಕ್ರವಾರ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.


ಬ್ರಿಡ್ಜ್ ಮೇಲಿನ ಎಲ್ಲ ನೀರು ಒಂದೇ ಕಡೆ ಸೇರಿ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಈ ನೀರು ಹೊರಗೆ ಹಾಕಲು ಇಲ್ಲಿಯ ಸಿಬ್ಬಂದಿ ಹರಸಾಹಸ ಪಟ್ಟರು. ಬಸ್‌ಗಳು, ಕಾರು ಹಾಗೂ ದ್ವಿಚಕ್ರ ವಾಹನಗಳು ನೀರು ನಿಂತಿರುವುದರಿಂದ ಸಂಚಾರ ಮಂದಗತಿಯಲ್ಲಿ ಸಾಗಿತ್ತು. ಇದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡಾ ಆಯಿತು ಎಂದು ಸವಾರರೊಬ್ಬರು ಸಂಜೆ ದರ್ಪಣಕ್ಕೆ ತಿಳಿಸಿದರು.


ಈ ಕೂಡಲೇ ಸಂಬಂಧಿಸಿದ ಇಲಾಖೆಯವರು ಈ ನೀರು ನಿಲ್ಲದಂತೆ ಕ್ರಮ ಕೈಗೊಂಡು ಸುಮಗ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ದ್ವಿಚಕ್ರ ವಾಹನ ಸವಾರ ವಿನಯ ಶಿಂಧೆ ಒತ್ತಾಯಿಸಿದರು.

administrator

Related Articles

Leave a Reply

Your email address will not be published. Required fields are marked *