ಹುಬ್ಬಳ್ಳಿ-ಧಾರವಾಡ ಸುದ್ದಿ

ಬಲಿಗಾಗಿ ಕಾದಿರುವ ಮ್ಯಾನ್‌ಹೋಲ್

ಹುಬ್ಬಳ್ಳಿ: ಹೌದು ಇಲ್ಲಿಯ ಕಾಳಿದಾಸನಗರದ ಭಾರತಿ ಕಾಲೋನಿಯ ಮನೆ ಸಂಖ್ಯೆ 174 ನಿವಾಸಿ ಅವರ ಮನೆ ಮುಂದೆ ಮ್ಯಾನ್‌ಹೊಲ್ ಒಪನ್ ಆಗಿ ಸುಮಾರು ದಿನಗಳಾಗಿದೆ.
ಈ ಬಗ್ಗೆ ಹಲವು ಬಾರಿ ಪಾಲಿಕೆಯವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಮಕ್ಕಳು ಆಟ ಆಡುತ್ತಾರೆ. ಮಕ್ಕಳು ಇದರಲ್ಲಿ ಬಿದ್ದು ಯಾವುದೇ ಅನಾಹುತವಾದರೆ ಇದಕ್ಕೆ ಯಾರು ಹೊಣೆಗಾರರಾಗುತ್ತಾರೆ. ಅಲ್ಲದೇ ದ್ವಿಚಕ್ರ ವಾಹನ ಸವಾರರು ಕೂಡ ಸಂಚಾರಕ್ಕೆ ಮುಚ್ಚಳ ಇಲ್ಲದ ಮ್ಯಾನ್‌ಹೋಲ್ ತುಂಬಾ ತೊಂದರೆಯಾಗಿದೆ.


ಇಲ್ಲಿಯ ನಿವಾಸಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಸವರಾಜ ಚಗರೆಡ್ಡಿ ಅವರು ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರು ಯಾರು ಕರೆ ಸ್ವೀಕರಿಸುತ್ತಿಲ್ಲ ಎಂದು ಪತ್ರಿಕೆಗೆ ತಿಳಿಸಿದರು. ಸುಮಾರು 3 ತಿಂಗಳಿಂದ ಇದು ಇದೇ ಸ್ಥಿತಿಯಲ್ಲಿ ಇದೆ. ಮ್ಯಾನ್‌ಹೋಲ್ ಮೇಲಿನ ಮುಚ್ಚಳವನ್ನು ಶುಕ್ರವಾರ ತಂದು ಇಟ್ಟಿದ್ದಾರೆ. ಅದನ್ನು ಇದಕ್ಕೆ ಎಂದು ಹಾಕುತ್ತಾರೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು. ಯಾವುದೇ ಅನಾಹುತ ಆಗುವ ಮುಂಚೆ ಈ ಮ್ಯಾನ್‌ಹೋಲ್‌ಗೆ ಮುಚ್ಚಳ ಹಾಕಬೇಕು ಎಂದು ಇಲ್ಲಿಯ ನಿವಾಸಿಗಳು ಆಗ್ರಹಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *