ಹುಬ್ಬಳ್ಳಿ-ಧಾರವಾಡ ಸುದ್ದಿ

ಸಾಲಗಾರರ ಕಿರುಕುಳ: ನಿಂಗರಾಜ ಆತ್ಮಹತ್ಯೆ

ಧಾರವಾಡ: ಬಡ್ಡಿ ಸಾಲಗರರ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಉಪನಗರ ಠಾಣೆ ವ್ಯಾಪ್ತಿಯ ಚೈತನ್ಯ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ನಿಂಗರಾಜ ರಾಮಣ್ಣ ಸಿದ್ದಪ್ಪನವರ (37) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕರೆಪ್ಪ ರಾಮಪ್ಪ ಗುಳೇನವರ ಎಂಬುವರೇ ಕಿರುಕುಳ ನೀಡಿದ ಆರೋಪಿ.


2018ರಲ್ಲಿ ಕರೆಪ್ಪ ಗುಳೇನವರನಿಂದ ಹತ್ತು ಲಕ್ಷ ಸಾಲ ಪಡೆದಿದ್ದ ನಿಂಗರಾಜನು, ನಂತರ ಅವರಿಗೆ ಪ್ರತಿ ತಿಂಗಳು ಬಡ್ಡಿ ಸಂದಾಯ ಮಾಡುತ್ತ ಬಂದಿದ್ದನು. ಆದರೆ. ಕಳೆದ ಮೂರು ತಿಂಗಳಿನಿಂದ ಬಡ್ಡಿ ಸಂದಾಯ ಮಾಡದ ಕಾರಣ ಸಂಪೂರ್ಣ ಸಾಲ ವಾಪಸ್ಸು ಕೊಡುವಂತೆ ಒತ್ತಾಯ ಮಾಡಿದ್ದಾರೆ.
ಆಗ ನಿಂಗರಾಜನು ಈಗ ನನ್ನ ಬಳಿ ಹಣ ಇಲ್ಲ. ತೊಂದರೆ ಇದೆ. ಸ್ವಲ್ಪ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದರೂ ಕರೆಪ್ಪ ಗುಳೇನವರ, ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದಾನೆ. ಆದರೆ, ನಿಂಗರಾಜನು ಅಸಹಾಯಕನಾಗಿ ಒಪ್ಪದಿದ್ದಾಗ ಕರೆಪ್ಪನು ತನ್ನ ಮೂವರು ಸಹಚರರನ್ನು ಕರೆದುಕೊಂಡು ಬಂದು ಮನೆ ಖಾಲಿ ಮಾಡಬೇಕು. ಇಲ್ಲದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಧಮಕಿ ಹಾಕಿದ್ದಾರೆ.


ಘಟನೆಯಿಂದ ನೊಂದ ನಿಂಗರಾಜನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ನಿನ್ನೆ ರಾತ್ರಿ ಮನೆಯಲ್ಲಿ ವಿಷ ಸೇವನೆ ಮಾಡಿದ್ದಾನೆ. ತೀವ್ರ ಅಸ್ವಸ್ಥನಾದ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ. ಸಿಪಿಐ ಸಂಗಮೇಶ ದಿಡಿಗಿನಾಳ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

administrator

Related Articles

Leave a Reply

Your email address will not be published. Required fields are marked *