ಹುಬ್ಬಳ್ಳಿ-ಧಾರವಾಡ ಸುದ್ದಿ
ಆಪರೇಷನ್ ಹಸ್ತ ಅಲ್ಲ, ರಾಜಕೀಯ ಧ್ರುವಿಕರಣ

ಆಪರೇಷನ್ ಹಸ್ತ ಅಲ್ಲ, ರಾಜಕೀಯ ಧ್ರುವಿಕರಣ

10ರಿಂದ 30 ಮುಖಂಡರು ಕಾಂಗ್ರೆಸ್‌ಗೆ ಬರಬಹುದು: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಬಿಜೆಪಿಯಲ್ಲಿನ ವ್ಯವಸ್ಥೆಗೆ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಹಲವಾರು ನಾಯಕರು ಆಗಮಿಸುತ್ತಿದ್ದಾರೆ ಇದು ಆಪರೇಷನ್ ಹಸ್ತ ಅಲ್ಲ ಇದು ರಾಜಕೀಯ ಧ್ರುವಿಕರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಹಸ್ತ ಎಂದು ಅಪಹಾಸ್ಯ ಮಾಡುತ್ತಿದ್ದಾರೆ.ಆದರೆ ಅಲ್ಲಿನ ವ್ಯವಸ್ಥೆಯನ್ನು ನೋಡಿ ಬಹಳಷ್ಟು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.ಬಿಜೆಪಿ ಲೀಡರ್ ಲೆಸ್ ಪಾರ್ಟಿ ಯಾಗಿದೆ. ಕಾರ್ಯಕರ್ತರಿಂದ ದೊಡ್ಡವರವರೆಗೂ ಕಾಂಗ್ರೆಸ್ ಗೆ ಬರುತ್ತಿದ್ದಾರೆಂದರು.


ಮುನೇನಕೊಪ್ಪ ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೋ ಇಲ್ಲವೋ ಅನ್ನೋದು ಹೇಳೋದು ಸರಿಯಲ್ಲ. ಅವರಂತೆ ಬಿಜೆಪಿಯಲ್ಲಿ ಹಲವಾರು ಮಂದಿ ಬಿಜೆಪಿ ಪಕ್ಷದ ವ್ಯವಸ್ಥೆ ಯಿಂದ ನೊಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 10 ಜನರೂ ಬರಬಹುದು 30 ಜನರು ಬರಬಹುದು. ನನ್ನ ಮುಂದೆ ಬಹಳ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಪಕ್ಷಕ್ಕೆ ಬರುವ ಹೆಸರು ನಾನು ಹೇಳಿದರೆ ಮುಂದೆ ಅವರಿಗೆ ತೊಂದರೆಯಾಗುತ್ತದೆ ಸಮಯ ಬಂದಾಗ ಪಕ್ಷಕ್ಕೆ ಬರುವವರ ಹೆಸರು ಹೇಳುತ್ತೇನೆ ಎಂದು ತಿಳಿಸಿದರು.
ಬಿಜೆಪಿಯ ನಾಯಕರಷ್ಟೇ ಅಲ್ಲದೇ ತಳಮಟ್ಟದ ಕಾರ್ಯಕರ್ತರೂ ನನಗೆ ಕರೆ ಮಾಡುತ್ತಿದ್ದಾರೆ. ನನ್ನ ಮುಂದೆ ಬಹಳ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

administrator

Related Articles

Leave a Reply

Your email address will not be published. Required fields are marked *