ಹುಬ್ಬಳ್ಳಿ-ಧಾರವಾಡ ಸುದ್ದಿ
ರಾಯಾಪುರ ಬಳಿ 1.20 ಕೋಟಿಗೂ ಅಧಿಕ ಹಣ ದೋಚಿದ ಕಳ್ಳರು

ರಾಯಾಪುರ ಬಳಿ 1.20 ಕೋಟಿಗೂ ಅಧಿಕ ಹಣ ದೋಚಿದ ಕಳ್ಳರು

ಧಾರವಾಡ: ಸಮೀಪದ ರಾಯಾಪೂರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರದಲ್ಲಿ ಕೋಟಿಗೂ ಅಧಿಕ ನಗದು ಕಳ್ಳತನವಾಗಿದೆ.
ಸೋಮವಾರ ರಾತ್ರಿ ಸೆಕ್ಯುರಿಟಿ ಗಾರ್ಡ್‌ಗಳು ಊಟಕ್ಕೆ ಹೋದ ಸಂದರ್ಭದಲ್ಲಿ ಒಳನುಗ್ಗಿದ ಖದೀಮರು ಕಚೇರಿಯಲ್ಲಿನ 1.20 ಕೋಟಿ ರೂ. ನಗದು ದೋಚಿಕೊಂಡು ಹೋಗಿದ್ದಾರೆ.


ಕೋಣೆಯ ಕಿಟಕಿಯೊಳಗಿಂದ ಒಳ ಪ್ರವೇಶಿಸಿದ ದುಷ್ಕರ್ಮಿಗಳು, ಲಾಕರ್ ಒಡೆದು ಹಣ ದೋಚಿದ್ದಾರೆಂದು ತಿಳಿದು ಬಂದಿದೆ.ಸ್ಥಳಕ್ಕೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಎಸಿಪಿ ಪ್ರಶಾಂತ ಸಿದ್ಧನಗೌಡರ, ಸಿಪಿಐ ಸಂಗಮೇಶ ದಿಡಿಗಿನಾಳ ಅವರು ಶ್ವಾನ ಮತ್ತು ಬೆರಳಚ್ಚು ತಜ್ಞರ ಸಹಿತ ಭೇಟಿ ನೀಡಿದ್ದರು.
ಕಚೇರಿಯಲ್ಲಿ ಸಿಸಿಟಿವಿ ಇಲ್ಲದೇ ಇರುವುದು ಖದೀಮರ ಕಳ್ಳತನಕ್ಕೆ ಸಹಕಾರಿಯಾಗಿದೆ ಎನ್ನಲಾಗಿದೆ. ಈ ಕುರಿತು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

administrator

Related Articles

Leave a Reply

Your email address will not be published. Required fields are marked *