ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡ ಕೆಎಂಎಫ್‌ಗೆ ಶಿವಲೀಲಾ ವಿನಯ ಕುಲಕರ್ಣಿ ನಿರ್ದೇಶಕರಾಗಿ ನಾಮನಿರ್ದೇಶನ!

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟಕ್ಕೆ (ಕೆಎಂಎಎಫ್) ಪ್ರಭಾವಿ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ವಿನಯ ಕುಲಕರ್ಣಿ ಇಂದು ಸರಕಾರದಿಂದ ನಿರ್ದೇಶಕರಾಗಿ ನಾಮನಿರ್ದೇಶನಗೊಂಡಿದ್ದಾರೆ.


ಈಚೆಗೆ ನಡೆದ ಆಡಳಿತ ಮಂಡಳಿತ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ ಬೆನ್ನ ಹಿಂದೆಯೇ ಇಂದು ಶಿವಲೀಲಾ ಅಧಿಕಾರೆತರ ಸದಸ್ಯರಾಗಿ ನೇಮಕವಾಗಿದ್ಧು ಅಧ್ಯಕ್ಷ ಸ್ಥಾನದ ಚುನಾವಣೆ ರಂಗೇರುವುದು ಖಚಿತವಾಗಿದೆ.


ಒಕ್ಕೂಟದ ಒಟ್ಟು ೯ ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ (ಗದಗ ಮತ್ತು ನರಗುಂದ ತಾಲೂಕಿನಿಂದ ಹನುಮಂತಗೌಡ ಹಿರೇಗೌಡರ) ಅವಿರೋಧ ಆಯ್ಕೆಯಾಗಿದ್ದರು. ಉಳಿದ ೮ ಸ್ಥಾನಗಳಿಗೆ ಚುನಾವಣೆ ನಡೆಯಿತು. ಧಾರವಾಡ ಜಿಲ್ಲೆಯಿಂದ ಶಂಕರ ಮುಗದ, ಗೀತಾ ಸುರೇಶ ಮರಲಿಂಗಣ್ಣವರ, ಸುರೇಶ ಸೋಮಪ್ಪ ಬಣವಿ, ಗದಗ ಜಿಲ್ಲೆಯಿಂದ ನೀಲಕಂಠ ಅಸೂಟಿ, ಲಿಂಗರಾಜಗೌಡ ಹನುಮಂತಗೌಡ ಪಾಟೀಲ, ಉತ್ತರ ಕನ್ನಡ ಜಿಲ್ಲೆಯಿಂದ ಸುರೇಶ್ಚಂದ್ರ ಹೆಗಡೆ, ಪರಶುರಾಮ ವೀರಭದ್ರ ನಾಯ್ಕ ಹಾಗೂ ಶಂಕರ ಪರಮೇಶ್ವರ ಹೆಗಡೆ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ಅವಿರೋಧವಾಗಿ ಆಯ್ಕೆಯಾದ ಹಿರೇಗೌಡರ ಮತ್ತು ಅಸೂಟಿ ಹೊರತುಪಡಿಸಿ ಉಳಿದವರು ಬಿಜೆಪಿ ಬೆಂಬಲಿತರಾಗಿದ್ದಾರೆ.

administrator

Related Articles

Leave a Reply

Your email address will not be published. Required fields are marked *