ಹುಬ್ಬಳ್ಳಿ-ಧಾರವಾಡ ಸುದ್ದಿ
ಮೂವರು ಬಡ್ಡಿಕುಳಗಳು ಅಂದರ್

ಮೂವರು ಬಡ್ಡಿಕುಳಗಳು ಅಂದರ್

ಧಾರವಾಡ: ಬಡ್ಡಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ವಿಷ ಸೇವಿಸಿದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಇಲ್ಲಿನ ಶಹರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಗೊಲ್ಲರ ಕಾಲನಿಯ ನಜೀರಸಾಬ ಅತ್ತಾರನಿಗೆ ಸಾಲ ನೀಡಿ ಬಡ್ಡಿಗೆ ಕಿರುಕುಳ ನೀಡಿದ್ದ ಗೊಲ್ಲರ ಕಾಲನಿಯ ಗುಲಿಗೆಪ್ಪ ಬಳ್ಳಾರಿ, ಲಕ್ಷ್ಮಣ ಬಳ್ಳಾರಿ ಹಾಗೂ ಶಂಕರ ಗೊಲ್ಲರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.


ಖಾಸಗಿಯವರಿಂದ ಸಾಲ ಪಡೆದಿದ್ದ ನಜೀರಸಾಬ ಅತ್ತಾರ ಎಂಬಾತ ಬಡ್ಡಿ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ವಿಷ ಸೇವಿಸಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಆತನಿಗೆ ಪ್ರಜ್ಞೆ ಬಂದ ಬಳಿಕ ಹೆಚ್ಚಿನ ಮಾಹಿತಿ ಪಡೆದ ಶಹರ ಠಾಣೆಯ ಸಿಪಿಐ ಎನ್.ಜಿ. ಕಾಡದೇವರ ಹಾಗೂ ಸಿಬ್ಬಂದಿ ಎಸಿಪಿ ಪ್ರಶಾಂತ ಸಿದ್ದನಗೌಡರ ಮಾರ್ಗದರ್ಶನದಲ್ಲಿ ಕಿರುಕುಳ ನೀಡಿದವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *