ಹುಬ್ಬಳ್ಳಿ-ಧಾರವಾಡ ಸುದ್ದಿ
97 ಲಕ್ಷ ರೂ ದಾಖಲೆಗಳಿಲ್ಲದ ಚಿನ್ನಾಭರಣ ಜಪ್ತಿ

97 ಲಕ್ಷ ರೂ ದಾಖಲೆಗಳಿಲ್ಲದ ಚಿನ್ನಾಭರಣ ಜಪ್ತಿ

 ನರೇಂದ್ರ ಕ್ರಾಸ್ ಬಳಿ ಹುಬ್ಬಳ್ಳಿ ಮೂಲದ ಇಬ್ಬರ ಬಂಧನ

ಅಣ್ಣಿಗೇರಿ ಹೆಸರು ಕಾಳು ಕಳ್ಳತನ :ಉಗ್ರಾಣ ಪ್ರಭಾರಿ ಸೇರಿ ಇಬ್ಬರ ಸೆರೆ

ಧಾರವಾಡ : ದಾಖಲೆಗಳಿಲ್ಲದ 97 ಲಕ್ಷಕ್ಕೂ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು  ಪೂನಾ-ಬೆಂಗಳೂರ ರಸ್ತೆಯಲ್ಲಿನ ಧಾರವಾಡ ತಾಲೂಕಿನ ನರೇಂದ್ರ ಕ್ರಾಸ್ ಬಳಿ ಖಾಸಗಿ ಬಸ್‌ನಿಂದ ಗುರುವಾರ ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ವಿಕಾಸಕುಮಾರ  ಹೇಳಿದರು.

ನಗರದಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಮೂಲದ ಭವರಸಿಂಗ್ ವಿಜಯಸಿಂಗ್ ಚವ್ಹಾಣ ಮತ್ತು ನರಪತ್ ಸಿಂಗ್ ರತನಸಿಂಗ್ ಬಾಲೋತ್ ಎಂಬುವರನ್ನು ಬಂಧಿಸಲಾಗಿದೆ ಎಂದರು.

ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ನೇತೃತ್ವದಲ್ಲಿನ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ದಾಖಲೆಯಿಲ್ಲದ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ಖಾಸಗಿ ಮಾಲಿಕತ್ವದ ವಿಜಯಾನಂದ ಟ್ರಾವೆಲ್ಸ್ ನ ಬಸ್ ( ನಂ.ಜಿಎ.-07, ಟಿ.2538)ನ್ನು ನರೇಂದ್ರ ಕ್ರಾಸ್ ಬಳಿ ಬೆಳಗ್ಗೆ 9.35 ರ ಸುಮಾರಿಗೆ ತಪಾಸಣೆ ನಡೆಸಿದಾಗ ಬ್ಯಾಗ್ ನಲ್ಲಿ ಇಡಲಾಗಿದ್ದ 1237 ಗ್ರಾಂ. ಚಿನ್ನದ ಆಭರಣ, 15.174 ಕಿ.ಗ್ರಾಂ ಬೆಳ್ಳಿ ಆಭರಣ, ಬಿಸ್ಕಿಟು, ನಾಣ್ಯಗಳು ಸೇರಿ   ಒಟ್ಟು 97,97,64 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಸಿಪಿಐ ಕಮತಗಿ, ಪಿಎಸ್ ಐ ಬಸನಗೌಡ ಮೆಳ್ಳೆಪ್ಪನವರ, ಆರ್.ವಿ.ಕುಂಬಾರ, ನಾಗರಾಜ ಹಾಲವರ, ಎ.ಆರ್.ಜಾಧವ, ಮಂಜುನಾಥ ಚಿಕ್ಕಬಿ, ಕೃಷ್ಣ ವಿಭೂತಿ, ಮಲ್ಲೇಶ ಕಡತಿ, ಚನಬಸಪ್ಪ ಅರಳಿಮರದ ಮತ್ತು ತಂಡಕ್ಕೆ ಬಹುಮಾನ ನೀಡುವುದಾಗಿ ಘೋಷಿಸಿದರು. ಹೆಚ್ಚುವರಿ ಎಸ್ ಪಿ ನಾರಾಯಣ ಭರಮನಿ, ಡಿಎಸ್‌ಪಿ ನಾಗರಾಜ, ಸಿಪಿಐಗಳಾದ ಶಿವಾನಂದ ಕಮತಗಿ ಇತರರರು ಸುದ್ದಿಗೋಷ್ಠಿಯಲ್ಲಿದ್ದರು.

ಅಣ್ಣಿಗೇರಿ ಹೆಸರು ಕಾಳು ಕಳ್ಳತನ :ಉಗ್ರಾಣ ಪ್ರಭಾರಿ ಸೇರಿ ಇಬ್ಬರ ಸೆರೆ

ಧಾರವಾಡ : ಅಣ್ಣಿಗೇರಿ ಗೋದಾಮಿನಲ್ಲಿ ನಡೆದ ಹೆಸರು ಕಾಳು ಕಳ್ಳತನ ಪ್ರಕರಣಕ್ಕೆ ಈಗಾಗಲೇ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದು ರೈತರು ಪ್ರತಿಭಟನೆ ಸಹ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಲಯ ಐಜಿಪಿ ವಿಕಾಸಕುಮಾರ ಹೇಳಿದರು.

ಧಾರವಾಡದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಪ್ರಭಾರಿ ಉಗ್ರಾಣ ವ್ಯವಸ್ಥಾಪಕ ಆಕಾಶ ಸುಭಾಶ ಮುಶಣ್ಣವರ ಹಾಗೂ ಸಹೋದ್ಯೋಗಿ ಶಶಿಕುಮಾರ ಬಸಯ್ಯ ಹಿರೇಮಠ ಎಂಬಿಬ್ಬರನ್ನು  ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 70 ಲಕ್ಷ ರೂ. ಮೌಲ್ಯದ 1859 ಹೆಸರು ಕಾಳು ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಡಿಎಸ್‌ಪಿ ನೇತೃತ್ವದಲ್ಲಿ ನವಲಗುಂ ಸಿಪಿಐ ರವಿ ಕಪ್ಪತ್ತನವರ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಸಿಪಿಐ ಮುರಗೇಶ ಚನ್ನಣ್ಣವರ ಮತ್ತಿತರರು ಕಾರ್ಯಾಚರಣೆ ಕೈಗೊಂಡಿದ್ದರು.

administrator

Related Articles

Leave a Reply

Your email address will not be published. Required fields are marked *