ಹುಬ್ಬಳ್ಳಿ-ಧಾರವಾಡ ಸುದ್ದಿ

ಹುಬ್ಬಳ್ಳಿ ಎಪಿಎಂಸಿಗೆ ಕಿರೇಸೂರ ಸಾರಥ್ಯ

ಹುಬ್ಬಳ್ಳಿ: ಏಷ್ಯಾದ ಅತಿದೊಡ್ಡ ಎಪಿಎಂಸಿ ಹಿರಿಮೆಯ ಅಮರಗೋಳದಲ್ಲಿರುವ ಹುಬ್ಬಳ್ಳಿ ಎಪಿಎಂಸಿ ನೂತನ ಅಧ್ಯಕ್ಷರಾಗಿ ಕೋಳಿವಾಡ ಕ್ಷೇತ್ರದ ಸದಸ್ಯ ಸುರೇಶ ಕಿರೇಸೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಚುನಾವಣೆಗೆ ಕಿರೇಸೂರ ಮಾತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ಆಯ್ಕೆ ನಡೆಯಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ ಇವರು ಸೇರಿ ಇಂದು ಕಿರೇಸೂರ ಅವರನ್ನು ಅಂತಿಮಗೊಳಿಸಿದರು. ನಿನ್ನೆ ರಾತ್ರಿ ಎಲ್ಲ ಸದಸ್ಯರು ಸಭೆ ಸೇರಿದ್ದರೂ ಪೈಪೋಟಿಯಿದ್ದ ಕಾರಣ ಅಂತಿಮಗೊಂಡಿರಲಿಲ್ಲ. ಕಿರೇಸೂರ ಹಾಗೂ ಈಶ್ವರ ಕಿತ್ತೂರ ಮಧ್ಯೆ ಪೈಪೋಟಿಯಿತ್ತು.
ಸುಡಕೇನವರ ವಿರುದ್ದ ಮಂಡಿಸಲಾದ ಅವಿಶ್ವಾಸ ಅಂಗೀಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಇಂದು ಆಯ್ಕೆಗೆ ದಿನಾಂಕ ಗೊತ್ತುಪಡಿಸಲಾಗಿತ್ತು.

administrator

Related Articles

Leave a Reply

Your email address will not be published. Required fields are marked *