ಹುಬ್ಬಳ್ಳಿ-ಧಾರವಾಡ ಸುದ್ದಿ
ಲೋಕ ಕಲ್ಯಾಣಕ್ಕಾಗಿ ಯೋಗಾ ತಂಡದಿ0ದ ಪಾದಯಾತ್ರೆ

ಲೋಕ ಕಲ್ಯಾಣಕ್ಕಾಗಿ ಯೋಗಾ ತಂಡದಿ0ದ ಪಾದಯಾತ್ರೆ

ಧಾರವಾಡ: ಇಲ್ಲಿನ ಮಲ್ಲಸಜ್ಜನ ಶಾಲೆಯ ಯೋಗ ತಂಡದವರು ಧಾರವಾಡದಿಂದ ಹುಬ್ಬಳ್ಳಿಯ ಸಿದ್ದಾರೂಢರ ಮಠದವರೆಗೆ ಪಾದಯಾತ್ರೆಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.


ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಈ ತಂಡವು ಲೋಕ ಕಲ್ಯಾಣಕ್ಕಾಗಿ ಹುಬ್ಬಳ್ಳಿಯ ಸಿದ್ದಾರೂಢರ ಮಠದವರೆಗೆ ಪಾದಯಾತ್ರೆ ಮೂಲಕ ತೆರಳಿ ಅಜ್ಜನ ದರ್ಶನ ಪಡೆದು ಪೂಜೆ ಸಲ್ಲಿಸುತ್ತ ಬಂದಿದ್ದಾರೆ.


ಶನಿವಾರ ಮಧ್ಯಾಹ್ನ ಮಲ್ಲಸಜ್ಜನ ಶಾಲೆಯಿಂದ ಪಾದಯತ್ರೆ ಆರಂಭಿಸಲಾಯಿತು.ಶನಿವಾರ ರಾತ್ರಿ ಮಠದಲ್ಲಿ ಪೂಜೆ ಸಲ್ಲಿಸಿ ಲೋಕ ಕಲ್ಯಾಣಕ್ಕೆ ಪ್ರಾರ್ಥಿಸಿದರು.


ಪಾದಯಾತ್ರೆಯಲ್ಲಿ ಮಂಜುನಾಥ ಹೂಗಾರ, ಸವಿತಾ ಅಮರಶೆಟ್ಟಿ, ವಸುಂಧರಾ ಹಾವೇರಿ, ಪೂಜಾ ಹಾವಣಗಿ, ಗೀತಾ ವೀರಾಪುರ, ಪೂರ್ಣೀಮಾ ಹಿರೇಮಠ, ಸುನೀಲ ಚಟ್ನಿಸ್, ದೇವರಾಜ ಹೂವಿನಾಳ, ಕುಮಾರ ಕುರುಬೆಟ್ಟ, ಸುರೇಶ ಆಯಟ್ಟಿ, ಸುಲೋಚನಾ ಬಸರಗೋಳ, ಪ್ರಕಾಶ ಅಮರಶೆಟ್ಟಿ, ಮುತ್ತಪ್ಪ ಹಡಗಲಿ, ಮಲ್ಲಿಕಾರ್ಜುನ ಹರ್ಲಾಪೂರ, ತೇಜಸ್ವಿನಿ ಕಬಾಡೆ, ರಾಜೇಶ್ವರಿ ನೀರಲಕೇರಿ ಸೇರಿದಂತೆ 40 ಜನರು ಭಾಗವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *