ಹುಬ್ಬಳ್ಳಿ-ಧಾರವಾಡ ಸುದ್ದಿ
ಕುರುಬ ಸಂಘಟನೆ: ಮಲಕಾರಿ ಉಸ್ತುವಾರಿ

ಕುರುಬ ಸಂಘಟನೆ: ಮಲಕಾರಿ ಉಸ್ತುವಾರಿ

ಹುಬ್ಬಳ್ಳಿ: ಕರ್ನಾಟಕ ಪ್ರದೇಶದ ಕುರುಬರ ಸಂಘದ ವತಿಯಿಂದ ಸಮಾಜ ಸಂಘಟನೆ, ಜಿಲ್ಲಾ ಮತ್ತು ತಾಲೂಕಾ ಶಾಖೆ ಸೇರಿದಂತೆ ವಿವಿಧ ಘಟಕಗಳ ರಚನೆಗೆ ಉಸ್ತುವಾರಿಯಾಗಿ ಪ್ರದೇಶ ಕುರುಬರ ಸಂಘದ ನಿರ್ದೇಶಕ ಬಸವರಾಜ ಮಲಕಾರಿ ನಿಯುಕ್ತಿಗೊಂಡಿದ್ದಾರೆ.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಮೂರ್ತಿ ಈ ಆದೇಶ ಪ್ರಕಟಿಸಿದ್ದು, ಜಿಲ್ಲೆಯ ಎಲ್ಲೆಡೆ ಪ್ರವಾಸ ಮಾಡಿ, ಜಿಲ್ಲಾ ಸಂಘದ ಪದಾಧಿಕಾರಿಗಳು, ನಿರ್ದೇಶಕರುಗಳ ಜೊತೆ ಪೂರ್ವಭಾವಿ ಸಭೆ ನಡೆಸಿ, ಹೊಸ ಯುವ, ಮಹಿಳಾ, ಸೇರಿದಂತೆ ವಿವಿಧ ಘಟಕಗಳನ್ನು ಒಂದು ತಿಂಗಳ ಅವಧಿಯೊಳಗಾಗಿ ರಚಿಸಬೇಕೆಂದು ಸೂಚಿಸಲಾಗಿದೆ.
ಜಿಲ್ಲೆಯ ಕುರುಬ ಸಮುದಾಯದ ಸಂಘಟನೆಯ ದೃಷ್ಟಿಯಿಂದ ಈ ಘಟಕಗಳ ಆಯ್ಕೆ ಮುಖ್ಯವಾಗಿದ್ದು, ಇದರಿಂದಲೇ ಮುಂದೆ ರಾಜ್ಯ ಸಮಿತಿ ಅಸ್ತಿತ್ವಕ್ಕೆ ಬರಲಿರುವ ಹಿನ್ನೆಲೆಯಲ್ಲಿ ಇದು ಮಹತ್ವದ್ದಾಗಿದೆ.

administrator

Related Articles

Leave a Reply

Your email address will not be published. Required fields are marked *