ಹುಬ್ಬಳ್ಳಿ-ಧಾರವಾಡ ಸುದ್ದಿ
ಮೋದಿಯಿಂದ ’ಸಬ್ ಕಾ ಸರ್ವನಾಶ’: ಖರ್ಗೆ

ಮೋದಿಯಿಂದ ’ಸಬ್ ಕಾ ಸರ್ವನಾಶ’: ಖರ್ಗೆ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ನಿರಂಕುಶ ಆಡಳಿತ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಟೀಕಿಸಿದರು.
ಹಾನಗಲ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಮುನ್ನ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿಯವರು, ಕಪ್ಪು ಹಣ ತರತೇವಿ ಅಂದರು. ಆದರೆ, ಯಾರಿಗೂ ಹಣ ಬರಲಿಲ್ಲ ಎಂದರು.
ಮೋದಿಯವರ ಅಭಿವೃದ್ದಿ ಮಂತ್ರ ’ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಅಂದರು. ಆದರೀಗ ’ಸಬ್ ಕಾ ಸರ್ವನಾಶ’ ಆಗ್ತಾ ಇದೆ ಎಂದು ಖರ್ಗೆ ದೂರಿದರು.
ಡಿಸೇಲ್ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ನಾವು ಅಧಿಕಾರದಲ್ಲಿದ್ದಾಗ ಒಂದು ರೂಪಾಯಿ ತೈಲ ಬೆಲೆ ಏರಿಕೆ ಆದರೆ ಪ್ರತಿಭಟನೆ ಮಾಡಿದ ಬಿಜೆಪಿಯವರು ಈಗ ಎಲ್ಲಿ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಸುಳ್ಳು ಹೇಳಿ ಹೇಳಿ ಅಧಿಕಾರಿ ಮಾಡಿದರು. ಅದಕ್ಕೆ ಒಂದು ಸಮಯ ಬರುತ್ತೆ, ಅದಕ್ಕೆ ಜನರು ಪ್ರತ್ಯುತ್ತರ ನೀಡುತ್ತಾರೆ. ಇದೇ ರೀತಿಯಾಗಿ ಹಿಂದೆ ಹಿಟ್ಲರ್ ಆಡಳಿತ ಮಾಡಿದ್ದರು ಎಂದರು.
ಸೋನಿಯಾ ಗಾಂಧಿ ನಮ್ಮ ನಾಯಕಿಯಾಗಿದ್ದು, ಈಗ ಅವರೇ ನಮ್ಮ ಅಧ್ಯಕ್ಷೆಯಾಗಿದ್ದಾರೆ. ರಾಹುಲ್ ಗಾಂಧಿ ಕೂಡಾ ನಮ್ಮ ನಾಯಕರು ಆಗಿದ್ದಾರೆ. ಅವರೇ ಮುಂದೆ ಎಐಸಿಸಿ ಅಧ್ಯಕ್ಷರಾಗುತ್ತಾರೆ. ಅದರಲ್ಲಿ ಯಾವುದೇ ಸಂಶಯ ಇಲ್ಲ. ರಾಹುಲ್ ಸರ್ಮರ್ಥರಾಗಿದ್ದಕ್ಕೆ ಅವರ ವಿರುದ್ಧ ಮೋದಿ, ಶಾ ಕಣ್ಣಿಟ್ಟಿದ್ದಾರೆ ಎಂದರು.

administrator

Related Articles

Leave a Reply

Your email address will not be published. Required fields are marked *