ಹುಬ್ಬಳ್ಳಿ-ಧಾರವಾಡ ಸುದ್ದಿ
ಅತ್ತಿಗೆ ಕೊಂದು ನೇಣಿಗೆ ಶರಣಾದ ನಾದಿನಿ!

ಅತ್ತಿಗೆ ಕೊಂದು ನೇಣಿಗೆ ಶರಣಾದ ನಾದಿನಿ!

ಶಿಗ್ಗಾವಿಯ ಮ್ಯಾಗೇರಿ ಓಣಿಯಲ್ಲಿ ಘಟನೆ

ಶಿಗ್ಗಾವಿ : ಅತ್ತಿಗೆಯನ್ನು ಹತ್ಯೆಗೈದು ನಾದಿನಿ ನೇಣು ಹಾಕಿಕೊಂಡಿರುವ ಘಟನೆ ಇಲ್ಲಿನ ಮ್ಯಾಗೇರಿ ಓಣಿಯಲ್ಲಿ ನಡೆದಿದೆ.
ಸುತ್ತಿಗೆಯಿಂದ ಅತ್ತಿಗೆ ತಲೆಗೆ ಹೊಡೆದು ಕೊಲೆ ಮಾಡಿದ ಬಳಿಕ ನಾದಿನಿ ನೇಣಿಗೆ ಶರಣಾದ್ದಾರೆ. ಈ ಘಟನೆ ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಸ್ಥಳಕ್ಕೆ ಶಿಗ್ಗಾಂವಿ ಡಿವೈಎಸ್ಪಿ ಕಲ್ಲೇಶಪ್ಪ ಹಾಗೂ ಸಿಪಿಐ ಬಸವರಾಜ ಹಲಬಣ್ಣವರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


66 ವರ್ಷದ ಜಯಶ್ರೀ ಪಾಟೀಲ್ ಹತ್ಯೆಯಾದವಳಾಗಿದ್ದು, ಮಂಜುಳಾ ಪಾಟೀಲ್(50) ಕೊಲೆ ಮಾಡಿ ನೇಣಿಗೆ ಶರಣಾದ ನಾದಿನಿಯಾಗಿದ್ದಾಳೆ. ಮಂಜುಳಾ ಮನೆಯಲ್ಲಿದ್ದ ಸುತ್ತಿಗೆಯಿಂದ ಅತ್ತಿಗೆ ಜಯಶ್ರೀ ತಲೆಗೆ ಹೊಡೆದು ಆನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರೊಂದಿಗೆ ನಾಲ್ಕು ಜನ ಊರಿನವರನ್ನು ಕರೆದುಕೊಂಡು, ಬಾಗಿಲು ಒಡೆದು ಒಳಗೆ ಬನ್ನಿರಿ ಅಂತಾ ಬರೆದಿಟ್ಟು, ಅದನ್ನು ಬಾಗಿಲಿಗೆ ನೇತು ಹಾಕಿ ಮಂಜುಳಾ ನೇಣಿಗೆ ಕೊರಳೊಡ್ಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *