ಹುಬ್ಬಳ್ಳಿ-ಧಾರವಾಡ ಸುದ್ದಿ

ಮೂರುಸಾವಿರಮಠ ವಿಷಯ ಶೀಘ್ರ ಇತ್ಯರ್ಥ

ಕಿತ್ತೂರು: ಮೂರುಸಾವಿರಮಠದ ಉತ್ತರಾಧಿಕಾರ ಸಹಿತ ಎಲ್ಲ ವಿಷಯ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂಬ ವಿಶ್ವಾಸವನ್ನು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ಹಿಂದೆ ಸತ್ಯ ದರ್ಶನ ಹಮ್ಮಿಕೊಳ್ಳಲಾಗಿತ್ತಲ್ಲದೇ ಆಸ್ತಿ ಪರಭಾರೆ ವಿರುದ್ದ ಹೋರಾಟ ಹಮ್ಮಿಕೊಳ್ಳಲಾಗಿತ್ತು. ತದನಂತರ ಕೋವಿಡ್ ಅಲೆ ಹಿನ್ನೆಲೆಯಲ್ಲಿ ವಿಳಂಭವಾಗಿತ್ತು. ಶೀಘ್ರ ಈ ವಿವಾದ ಬಗೆಹರಿಯಲಿದೆ.ಈ ನಿಟ್ಟಿನಲ್ಲಿ ಯತ್ನ ನಡೆದಿದೆ ಎಂದರು.
ಸಮಾಜದ ಮುಖಂಡರಲ್ಲಿ ಒಗ್ಗಟ್ಟಿನ ಕೊರತೆ ಎಂಬುದಾಗಿ ಹೇಳಿದ ಅವರು ಮಠಗಳ ಆಸ್ತಿಯನ್ನು ಕಬಳಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.ಹಿಂದೆ ಮಠಕ್ಕೆ ಭಕ್ತರು ಆಸ್ತಿಯನ್ನು ದಾನ ನೀಡುತ್ತಿದ್ದರು ಎಂದರು.

administrator

Related Articles

Leave a Reply

Your email address will not be published. Required fields are marked *