ಹುಬ್ಬಳ್ಳಿ-ಧಾರವಾಡ ಸುದ್ದಿ

ವೃಷಾಲಿ, ತೇಷುಬ್‌ಗೆ ಟಿಟಿಯಲ್ಲಿ ಪ್ರಶಸ್ತಿ

ಧಾರವಾಡ: ಬೆಂಗಳೂರಿನ ಬಿಎನ್‌ಎಂ ಕ್ಲಬ್‌ನ ವೃಷಾಲಿ ಕಿಣಿ ಹಾಗೂ ಚೆಕ್‌ಮೇಟ್ ಕ್ಲಬ್‌ನ ತೇಷುಬ್ ದಿನೇಶ್ ಅವರು ಇಲ್ಲಿನ ಕಾಸ್ಮಸ್ ಕ್ಲಬ್ ಆಯೋಜಿಸಿರುವ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 13ವರ್ಷದ ಒಳಗಿನವರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.


ಶುಕ್ರವಾರ ನಡೆದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ವೃಷಾಲಿ ಕಿಣಿ 14-12, 13-15, 11-8, 5-11, 11-9ರಲ್ಲಿ ಬಿಟಿಟಿ ಅಕಾಡೆಮಿಯ ತನಿಷ್ಕಾ ಕಪಿಲ್ ಕಾಲಬೈರವ ಎದುರು ಗೆಲುವು ಸಾಧಿಸಿದರು.
ಬಾಲಕರ ಫೈನಲ್‌ನಲ್ಲಿ ತೇಷುಬ್ 9-11, 11-7. 15-13, 11-7ರಲ್ಲಿ ತಮ್ಮದೇ ಕ್ಲಬ್ ಮೋಹಿನಿಷ್ ನಂದಿ ನಾರಾ ಎದುರು ಜಯಗಳಿಸಿ ಪ್ರಶಸ್ತಿ ಪಡೆದರು.

 

administrator

Related Articles

Leave a Reply

Your email address will not be published. Required fields are marked *