ಹುಬ್ಬಳ್ಳಿ-ಧಾರವಾಡ ಸುದ್ದಿ

ಟಿಟಿ: ಅಭಿನವ, ನೇತ್ರಾಗೆ ಪ್ರಶಸ್ತಿ

ಧಾರವಾಡ: ಬೆಂಗಳೂರು ಸುರೇಶಬಾಬು ಟೆಬಲ್ ಟೆನಿಸ್ ಅಕಾಡೆಮಿ(ಎಸ್‌ಬಿಟಿಟಿಎ)ಯ ಅಭಿನವ ಕೆ.ಮೂರ್ತಿ ಹಾಗೂ ಪಾಂಗ್ ಸ್ಮ್ಯಾಷರ್‍ಸ್ ಟೆಬಲ್ ಟೆನಿಸ್ ಅಕಾಡೆಮಿ(ಪಿಎಸ್‌ಟಿಟಿಎ)ಯ ನೀತಾ ಅಗ್ರವಾಲ್ ಅವರು ಇಲ್ಲಿನ ಕಾಸ್ಮಸ್ ಕ್ಲಬ್ ಆಯೋಜಿಸಿರುವ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 15 ವರ್ಷದ ಒಳಗಿನವರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.


ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಎಸ್‌ಬಿಟಿಟಿಎನ ಅಭಿನವ ಕೆ.ಮೂರ್ತಿ 11 – 9,12 – 10,11 – 8ರಲ್ಲಿ ಪಿಎಸ್‌ಟಿಟಿಎ ವರುಣ ಕೈಶಪ್ ಎದುರು ಗೆಲುವು ಸಾಧಿಸಿದರು.
ಬಾಲಕಿಯರ ಫೈನಲ್‌ನಲ್ಲಿ ಪಿಎಸ್‌ಟಿಟಿಎಯ ನೀತಾ ಅಗ್ರವಾಲ್ 5 – 11,12 – 10,11 – 9,12 – 10ರಲ್ಲಿ ಮೊದಲಿಯಾರ ಸೇವಾ ಸಂಘದ ನಿಹಾರಿಕಾ ಎದುರು ಜಯಗಳಿಸಿ ಪ್ರಶಸ್ತಿ ಪಡೆದರು.
ವಿಜೇತರಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಬಹುಮಾನ ವಿತರಿಸಿದರು. ರವಿ ನಾಯಕ, ವಿನೋದ ಪಾಟೀಲ, ನಿತೀನ ಟಗರಪುರ, ಹನುಮಂತ ಕೊಟಬಾಗಿ, ಬಸವರಾಜ ತೇಗೂರು, ಸಿ.ಎಚ್.ಜೋಗಿಹಳ್ಳಿ, ರುದ್ರಸ್ವಾಮಿ, ಟಿ.ಜಿ.ಉಪಾಧ್ಯ ಸೇರಿದಂತೆ ಇತರರಿದ್ದರು.

 

kosmos-cup-karnataka-state-ranking-table-tennis-tournament/KOSMOS CLUB DHARWAD/21-11-2021

administrator

Related Articles

Leave a Reply

Your email address will not be published. Required fields are marked *