ಹುಬ್ಬಳ್ಳಿ-ಧಾರವಾಡ ಸುದ್ದಿ
ಮೂರು ವರ್ಷದ ಕಾನೂನು ಪದವಿ ಬಂದ್‌ಗೆ ವಿರೋಧ

ಮೂರು ವರ್ಷದ ಕಾನೂನು ಪದವಿ ಬಂದ್‌ಗೆ ವಿರೋಧ

ಧಾರವಾಡ: ಮೂರು ವರ್ಷದ ಕಾನೂನು ಪದವಿ ಬಂದ್ ಮಾಡಿರುವ ಕರ್ನಾಟಕ ವಿಶ್ವವಿದ್ಯಾಲಯದ ತೀರ್ಮಾನಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ.
ನಗರದಲ್ಲಿನ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ ಪ್ರಸ್ತುತ ವರ್ಷ ಮೂರು ವರ್ಷಗಳ ಕಾನೂನಿನ ಪದವಿ ಪ್ರವೇಶ ಸ್ಥಗಿತಗೊಳಿಸಿದೆ. ಇದರಿಂದ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಮೂರು ವರ್ಷದ ಕಾನೂನು ಪದವಿಯಿಂದ ವಂಚಿತರಾಗುತ್ತಾರೆ. ಹೀಗಾಗಿ ಕವಿವಿ ವಿದ್ಯಾರ್ಥಿಗಳಿಗೆ ಅನಾನುಕೂಲ ವಾಗದಂತೆ ನೋಡಿಕೊಳ್ಳಬೇಕಿದೆ.


ಕಳೆದ ವರ್ಷವೂ ಈ ರೀತಿಯ ತೊಂದರೆ ಮಾಡಿ ನಂತರ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಪುನಃ ಪ್ರವೇಶ ಆರಂಭಿಸಲಾಗಿತ್ತು. ಇದೀಗ ಮತ್ತೇ ಕವಿವಿ ಇಂತಹ ನಡೆ ಅನುಸಿರಿಸುವುದು ನೋಡಿದರೆ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂಬಂತೆ ಕಂಡು ಬರುತ್ತಿದೆ.
ಈ ಬಗ್ಗೆ ಕವಿವಿ ಕುಲಸಚಿವ ಹನುಮಂತಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದು ಸರಿಯಲ್ಲ. ಆದ್ದರಿಂದ ಕವಿವಿ ತನ್ನ ತೀರ್ಮಾನದಿಂದ ಹಿಂದಕ್ಕೆ ಸರಿಯದಿದ್ದರೆ ಕವಿವಿ ಆಡಳಿತ ಮಂಡಳಿಯ ಕಚೇರಿ ಎದುರಿಗೆ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುರೇಶ್ ಕೆ ನೇತೃತ್ವದಲ್ಲಿ ಕುಲಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಹಿ ಮಾಡಿದ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

 

administrator

Related Articles

Leave a Reply

Your email address will not be published. Required fields are marked *