ಹುಬ್ಬಳ್ಳಿ-ಧಾರವಾಡ ಸುದ್ದಿ
ಪೇಡೆನಗರಿಯಲ್ಲಿ ಬಾಲ ಬಿಚ್ಚಿದ ಸರಗಳ್ಳರು; ಪೊಲೀಸ್ ಬೈಕ್‌ನಲ್ಲೆ ಕಳುವು

ಪೇಡೆನಗರಿಯಲ್ಲಿ ಬಾಲ ಬಿಚ್ಚಿದ ಸರಗಳ್ಳರು; ಪೊಲೀಸ್ ಬೈಕ್‌ನಲ್ಲೆ ಕಳುವು

  1. ಧಾರವಾಡ: ಪೇಡೆನಗರಿಯಲ್ಲಿ ಮತ್ತೆ ಸರಗಳ್ಳರ ಕೈಚಳಕ ಹೆಚ್ಚಿದ್ದು ಎರಡು ಮಹಿಳೆಯರ ಕೊರಳಲ್ಲಿನ ಚಿನ್ನದ ಸರಗಳನ್ನು ಕಿತ್ತು ಪರಾರಿಯಾಗಿರುವ ಎರಡು ಪ್ರಕರಣಗಳು ವರದಿಯಾಗಿವೆ.
    ಅಚ್ಚರಿಯ ಸಂಗತಿ ಎಂದರೆ‘ಪೊಲೀಸ್’ ಎಂದು ಬರೆಯಲಾದ ಬೈಕ್ ಮೇಲೆ ಬಂದು ಎರಡೂ ಸ್ಥಳಗಳಲ್ಲಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
    ಬೆಳಗ್ಗೆ ಶಹರ ಠಾಣಾ ವ್ಯಾಪ್ತಿಯ ಹೊಸಯಲ್ಲಾಪುರ ಹಾಗೂ ಶ್ರೀನಗರದಲ್ಲಿ ಸರಗಳ್ಳತನ ನಡೆದಿವೆ. ಹೊಸಯಲ್ಲಾಪುರದ ವೇದಾ ಬಿಜಾಪೂರ ಎಂಬ ಮಹಿಳೆ ವಾಯು ವಿಹಾರಕ್ಕೆಂದು ಹೊರಟಿದ್ದ ಸಂದರ್ಭದಲ್ಲಿ ಅವರ ಕೊರಳಲ್ಲಿದ್ದ 3.50 ಗ್ರಾಂ ಚಿನ್ನದ ಸರ ಹಾಗೂ ಶ್ರೀನಗರದಲ್ಲಿ ವಾಯು ವಿಹಾರಕ್ಕೆಂದು ತೆರಳಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ 4.50 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್ ಮೇಲೆ ಬಂದ ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
    ನಗರದಲ್ಲಿ ಕಳ್ಳತನವಾದ ಬೈಕ್‌ಗಳನ್ನೇ ಖದೀಮರು ಸರಗಳ್ಳತನಕ್ಕೆ ಪೊಲೀಸ್ ಎಂದು ಬರೆದು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಉಪನಗರ ಹಾಗೂ ಶಹರ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.

 

administrator

Related Articles

Leave a Reply

Your email address will not be published. Required fields are marked *