ಹುಬ್ಬಳ್ಳಿ-ಧಾರವಾಡ ಸುದ್ದಿ
ರಾಜ್ಯಪಾಲರ ಆದೇಶದ ಬೆನ್ನಲ್ಲಿ ಎಸಿಬಿ ತನಿಖೆ; ಕರ್ನಾಟಕ ವಿವಿ ಸೌರ ವಿದ್ಯುತ್ ಘಟಕ ಅವ್ಯವಹಾರ

ರಾಜ್ಯಪಾಲರ ಆದೇಶದ ಬೆನ್ನಲ್ಲಿ ಎಸಿಬಿ ತನಿಖೆ; ಕರ್ನಾಟಕ ವಿವಿ ಸೌರ ವಿದ್ಯುತ್ ಘಟಕ ಅವ್ಯವಹಾರ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಸೌರ ವಿದ್ಯುತ್ ಘಟಕ ನಿರ್ಮಾಣದಲ್ಲಿ ಅವ್ಯವಹಾರ ಪ್ರಕರಣ ಕುರಿತು ಇದೀಗ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಆರಂಭಿಸಿದೆ.
ಈ ಮೂಲಕ ಒಂದಿಲ್ಲೊಂದು ಅವ್ಯವಹಾರದಲ್ಲಿ ಆಗಾಗ್ಗೆ ಸುದ್ದಿಯಾಗುವ ಕರ್ನಾಟಕ ವಿಶ್ವವಿದ್ಯಾಲಯ ಇದೀಗ ಮತ್ತೆ ತನ್ನ ಪರಂಪರೆ ಮುಂದುವರೆಸಿದೆ.


2014 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೌರ ವಿದ್ಯುತ್ ಘಟಕ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಂಡಿಕೇಟ್ ಮಾಜಿ ಸದಸ್ಯ ಜಯಂತ ಎಂಬುವವರು ಎಸಿಬಿಗೆ ದೂರು ನೀಡಿದ್ದರು.
ಆಗ ಕುಲಪತಿಯಾಗಿದ್ದ ಪ್ರೊ.ಎಚ್.ಬಿ.ವಾಲೀಕಾರ ಅವರು ಒಂದು ಕೋಟಿ ಐದು ಲಕ್ಷ ರೂಪಾಯಿ ದುರ್ಬಳಕೆ ಮಾಡಿದ್ದಾರೆ ಎಂದು ಜಯಂತ ದೂರಿನಲ್ಲಿ ಆರೋಪಿಸಿದ್ದರು.
ಒಂದು ಕೋಟಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಲೇಟ್ ಅಳವಡಿಸಲಾಗಿದೆ. ೧೦೦ ಕಿಲೋ ವ್ಯಾಟ್ ವಿದ್ಯುತ್‌ನ್ನು ಈ ಸೋಲಾರ್ ಪ್ಲೇಟ್‌ಗಳು ತಯಾರಿಸಬೇಕಿತ್ತು. ಆದರೆ, ಇಷ್ಟು ವೆಚ್ಚದಲ್ಲಿ ಸೋಲಾರ್ ಪ್ಲೇಟ್ ಅಳವಡಿಕೆಯಾಗಿಲ್ಲ ಎಂಬುದು ಜಯಂತ ಅವರ ಆರೋಪ. ಈ ಕುರಿತು 2020 ರ ಡಿಸೆಂಬರ್ 30 ರಂದು ಜಯಂತ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.
ಇದೀಗ ಸೌರ ವಿದ್ಯುತ್ ಘಟಕ ನಿರ್ಮಾಣ ಕುರಿತು ವಿಚಾರಣೆ ನಡೆಸುವಂತೆ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ವಾಲೀಕಾರ ಅವರು ಕುಲಪತಿಯಾಗಿದ್ದ ಸಂದರ್ಭದಲ್ಲೇ ಹಲವು ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟಿದ್ದರು. ಇದೀಗ ಮತ್ತೇ ಅವರು ಕಂಟಕ ಎದುರಾಗಿದೆ.

administrator

Related Articles

Leave a Reply

Your email address will not be published. Required fields are marked *