ಹುಬ್ಬಳ್ಳಿ-ಧಾರವಾಡ ಸುದ್ದಿ

ಬೆಲ್ಲದ ಶೋರೂಮ್‌ನಿಂದ ನಾಲಾ ಒತ್ತುವರಿ: ಪಾಲಿಕೆಗೆ ನೋಟಿಸ್

ಆಯುಕ್ತರ ಎದುರು ದೂರುದಾರರ ಹೇಳಿಕೆ ದಾಖಲು

ಸಮಗ್ರ ವರದಿಗೆ ವಲಯಾಧಿಕಾರಿಗೆ ಸೂಚನೆ

ಹುಬ್ಬಳ್ಳಿ: ಉಣಕಲ್ ಗ್ರಾಮದ ಸರ್ವೇ ನಂ. 6/1ಬಿ2 ಹಾಗೂ 6/1ಬಿ3ರಲ್ಲಿ ಹಾದು ಹೋಗಿರುವ ಮಹಾನಗರ ಪಾಲಿಕೆಯ ಗಟಾರದ ಜಾಗವನ್ನು ಬೆಲ್ಲದ ಶೋರೂಂನವರು ಒತ್ತುವರಿ ಮಾಡಿರುವ ಬಗ್ಗೆ ಹೈಕೋರ್ಟ್‌ನಲ್ಲಿ ದೂರು ದಾಖಲಾಗಿದ್ದು, ಈ ಕುರಿತು ಹೈಕೋರ್ಟ್‌ನಿಂದ ಮಹಾನಗರ ಪಾಲಿಕೆಗೆ ನೋಟಿಸ್ ಜಾರಿಯಾಗಿದೆ.


ಈ ಹಿನ್ನೆಲೆಯಲ್ಲಿ ದೂರು ಸಲ್ಲಿಸಿದ ಶಿವಗಿರಿ ಪ್ರದೇಶದ ಅಶೋಕ ದ್ಯಾವನಗೌಡ್ರ, ಡಿ.ಕೆ. ಕಲಬುರ್ಗಿ ಸಹಿತ ಐವರು ಇಂದು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿದರು.


ಪಾಲಿಕೆ ಆಯುಕ್ತರ ಕಚೇರಿಯಿಂದ ದೂರುದಾರರಿಗೆ ಬಂದು ಲಿಖಿತ ಅಥವಾ ಸ್ವಯಂ ಹೇಳಿಕೆ ದಾಖಲಿಸುವಂತೆ ಸೂಚಿಸಲಾಗಿತ್ತು. ಬೆಲ್ಲದ ಶೋರೂಂನ ಅಧಿಕಾರಿಗಳೂ ತಮ್ಮ ಹೇಳಿಕೆ ದಾಖಲಿಸಿದರು. ಉಭಯ ಪಕ್ಷಗಳ ಹೇಳಿಕೆ ಆಲಿಸಿದ ಆಯುಕ್ತ ಡಾ. ಗೋಪಾಲಕೃಷ್ಣ ಅವರು ವಲಯ ನಂ. ೫ರ ಸಹಾಯಕ ಆಯುಕ್ತ ಕೆಂಭಾವಿ ಅವರಿಗೆ ನಾಲಾ ಸ್ಥಳ ಪರಿಶೀಲನೆ ಮಾಡಿ, ವಿವರವಾದ ವರದಿಯನ್ನು ನೀಡಲು ಸೂಚಿಸಿದರಲ್ಲದೇ ಈ ವರದಿಯನ್ನು ತಾವು ಹೈಕೋರ್ಟ್‌ಗೆ ಸಲ್ಲಿಸುವುದಾಗಿ ಹೇಳಿದ್ದಾರೆ.

administrator

Related Articles

Leave a Reply

Your email address will not be published. Required fields are marked *