ಹುಬ್ಬಳ್ಳಿ-ಧಾರವಾಡ ಸುದ್ದಿ

ಈಶ್ವರಪ್ಪ ಕೈ ಬಿಡಲು ಕಾಂಗ್ರೆಸ್ ಪ್ರತಿಭಟನೆ

ಹುಬ್ಬಳ್ಳಿ: ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಇಂದು ಆಗ್ರಹಿಸಿ ನಗರದ ಮಿನಿವಿಧಾನ ಸೌಧದೆದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಸಚಿವ ಈಶ್ವರಪ್ಪ ದೇಶದ್ರೋಹಿ ಎಂದು ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ ಹಳ್ಳೂರ, ಮುಖಂಡರಾದ ಎಂ.ಎಸ್.ಪಾಟೀಲ, ಸದಾನಂದ ಡಂಗನವರ, ಬಾಬಾಜಾನ ಮುಧೋಳ, ಪ್ರಸನ್ನ ಮೀರಜಕರ, ಪ್ರಕಾಶ ಕುರಹಟ್ಟಿ, ಜಗದೀಶ ನೀಲಗುಂದ, ರಾಜೇಂದ್ರ ಪಾಟೀಲ, ವೀರಣ್ಣ ಹಿರೇಹಾಳ, ಶರೀಫ ಗರಗದ, ಅಬ್ದುಲ್‌ಗಣಿ ವಲೀಅಹ್ಮದ, ಪ್ರವೀಣ ಶಲವಡಿ, ವಾದಿರಾಜ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಧಾರವಾಡ : ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಸಚಿವ ಕೆ. ಎಸ್.ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಕೆ ಎಸ್ ಈಶ್ವರಪ್ಪ ದೇಶದ್ರೋಹಿ ಎಂದು ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖಂಡರಾದ ಆನಂದ ಸಿಂಗನಾಥ, ನಾಗರಾಜ ಗುರಿಕಾರ, ರಾಜು ಎಚ್.ಎಂ, ಮಂಜುನಾಥ ಭೋವಿ, ಆನಂದ ಮುಶಣ್ಣವರ, ಪ್ರಕಾಶ್ ಹಳ್ಳಿಯಾಳ, ಆನಂದ ಜಾಧವ್, ಸೂರಜ್ ಗೌಳಿ, ಸತೀಶ್ ಗಿರಿಯಣ್ಣನವರ ಜೆಮ್ಸ್ ಯಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಚಿವ ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ನವಲಗುಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಕೆ.ಎನ್.ಗಡ್ಡಿ, ಎನ್.ಎಚ್.ಕೋನರಡ್ಡಿ, ವಿನೋದ ಅಸೂಟಿ, ವಿಜಯ್ ಕುಲಕರ್ಣಿ, ವರ್ಧಮಾನ ಹಿರೇಗೌಡರ, ಮಂಜು ಜಾಧವ, ಬಾಪುಗೌಡ ಪಾಟೀಲ, ವಿಜಯಗೌಡ ಪಾಟೀಲ ಇತರರಿದ್ದರು

ಪಶ್ಚಿಮ ಕ್ಷೇತ್ರದ ರಾಣಿ ಚನ್ನಮ್ಮ ಮತ್ತು ನವನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಧಾರವಾಡದಲ್ಲಿಂದು ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ಸಚಿವ ಕೆ.ಎಸ್. ಈಶ್ವರಪ್ಪನವರ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ನಾಗರಾಜ ಗೌರಿ, ಬಸವರಾಜ ಕಿತ್ತೂರ, ದೀಪಕ ಚಿಂಚೋರೆ, ಗಣೇಶ ಮುಧೋಳ, ಡಾ. ಮಯೂರ ಮೋರೆ, ಅಜಗರ ಮುಲ್ಲಾ, ದೀಪಾ ಗೌರಿ, ಆತ್ಮಾನಂದ ತಳವಾರ, ಬಸವರಾಜ ಜಾಧವ, ವಸಂತ ಅರ್ಕಾಚಾರ, ಶಂಕರ ಮುಗಳಿ, ನಿಂಗಪ್ಪ ಅಪ್ಪಣ್ಣವರ, ಷಣ್ಮುಖ ಬೆಟಗೇರಿ, ಲಕ್ಷ್ಮೀ ಗುತ್ತೆ, ಇನ್ನಿತರರಿದ್ದರು.

 

administrator

Related Articles

Leave a Reply

Your email address will not be published. Required fields are marked *