ಹುಬ್ಬಳ್ಳಿ-ಧಾರವಾಡ ಸುದ್ದಿ
ಅತ್ಯಾಚಾರ : ಯುಟ್ಯೂಬ್ ಪತ್ರಕರ್ತ ಅಂದರ್

ಅತ್ಯಾಚಾರ : ಯುಟ್ಯೂಬ್ ಪತ್ರಕರ್ತ ಅಂದರ್


ಪೇಡೆ ನಗರದಲ್ಲಿ ಕೆಲಸ ಕೊಡಿಸುವುದಾಗಿ ಹೀನ ಕೃತ್ಯ

ಧಾರವಾಡ: ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಯುಟ್ಯೂಬ್ ವಾಹಿನಿಯ ಪತ್ರಕರ್ತನೊಬ್ಬನನ್ನು ಇಲ್ಲಿನ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ಗರುಡ ವಾಹಿನಿಯ ಕೃಷ್ಣಮೂರ್ತಿ ಕುಲಕರ್ಣಿ ಬಂಧಿತ ಪತ್ರಕರ್ತ.
ಧಾರವಾಡ ತಾಲೂಕಿನ ಮಹಿಳೆ  ದೂರು ನೀಡಿದ್ದಾರೆ


ಆರೋಪಿ ಕೃಷ್ಣಮೂರ್ತಿಯು ಇಲ್ಲಿನ ಮಹಿಷಿ ರಸ್ತೆಯಲ್ಲಿರುವ ತನ್ನ ಮನೆಗೆ ಕಳೆದ ದಿ.27 ರಿಂದ ದಿ.1 ವರೆಗೆ ಮನೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ


ತಿಳಿಸಿದ್ದಾಳೆ.


ಈ ಹಿನ್ನೆಲೆಯಲ್ಲಿ ವಿದ್ಯಾಗಿರಿ ಠಾಣೆಯ ಸಿಪಿಐ ಬಾಳನಗೌಡ ಎಂ.ಕೆ. ಅವರು ನಿನ್ನೆ ರಾತ್ರಿ ಆರೋಪಿ ಕೃಷ್ಣಮೂರ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *