ಹುಬ್ಬಳ್ಳಿ-ಧಾರವಾಡ ಸುದ್ದಿ
ಕೆಎಚ್‌ಬಿ ಕಾಲನಿಯಲ್ಲಿ ಶ್ರೀಗಂಧ ಮರ ಕಳ್ಳತನ

ಕೆಎಚ್‌ಬಿ ಕಾಲನಿಯಲ್ಲಿ ಶ್ರೀಗಂಧ ಮರ ಕಳ್ಳತನ

ಹುಬ್ಬಳ್ಳಿ :ಇಂದು ಬೆಳಗಿನ ಜಾವ ಇಲ್ಲಿನ ಅರವಿಂದ ನಗರ ಬಳಿಯ ಕೆ.ಎಚ್.ಬಿ.ಕಾಲನಿಯಲ್ಲಿನ ನಿವಾಸಿಯೊಬ್ಬರ ಮನೆಯ ಆವರಣದಲ್ಲಿನ ಶ್ರೀಗಂಧದ ಮರ ಕಳ್ಳತನವಾಗಿದೆ.
ಕೆಎಚ್‌ಬಿ ಕಾಲನಿಯ ಶಿವಶಂಕರ ಐಹೊಳಿ ಎನ್ನುವವರ ಮನೆಯ ಆವರಣದಲ್ಲಿ ಬೆಳಗಿನ ಜಾವ 2-15ರ ಸುಮಾರಿಗೆ ಸುಮಾರು 6 ಜನರಿದ್ದ ಕಳ್ಳರ ತಂಡ 15 ನಿಮಿಷದಲ್ಲಿ ಗಂಧದ ಮರ ಕಡಿದು ಪರಾರಿಯಾಗಿದೆ.


ಕಳ್ಳರ ಕೈಚಳಕ ಪಕ್ಕದ ಮನೆಯ ಸಿಸಿಟಿವಿಯಲ್ಲೂ ಸೆರೆಯಾಗಿದ್ದು ಐಹೊಳಿಯವರು 112ಕ್ಕೆ ಕರೆ ಮಾಡಿ ಸಿಬ್ಬಂದಿ ಆಗಮಿಸಿದರೂ ಕಳ್ಳರು ಪರಾರಿಯಾಗಿದ್ದಾರೆ.
ಈ ಕುರಿತು ಅರಣ್ಯ ಅಧಿಕಾರಿಗಳಿಗೂ ದೂರು ನೀಡಲಾಗಿದೆ. ಇತ್ತೀಚೆಗೆ ಅವಳಿನಗರದಲ್ಲಿ ಗಂಧದ ಮರ ಕಳುವಿನ ಗ್ಯಾಂಗ್‌ನ ಕೈ ಚಳಕ ಹೆಚ್ಚಾಗಿದ್ದು ಕೆಲ ದಿನಗಳ ಹಿಂದೆ ಧಾರವಾಡದಲ್ಲಿ
ಜಿಲ್ಲಾಧಿಕಾರಿಗಳ ನಿವಾಸ ಆವರಣದಲ್ಲಿನ ಶ್ರೀಗಂಧದ ಮರ ಸಹ ಕಳುವು ಮಾಡಲಾಗಿತ್ತು.

administrator

Related Articles

Leave a Reply

Your email address will not be published. Required fields are marked *