ಹುಬ್ಬಳ್ಳಿ-ಧಾರವಾಡ ಸುದ್ದಿ
ಕೆಎಎಸ್ ತರಬೇತಿ ಪಡೆಯುತ್ತಿದ್ದ ರಬಕವಿ ಯುವತಿ ನೇಣಿಗೆ ಶರಣು

ಕೆಎಎಸ್ ತರಬೇತಿ ಪಡೆಯುತ್ತಿದ್ದ ರಬಕವಿ ಯುವತಿ ನೇಣಿಗೆ ಶರಣು

ಧಾರವಾಡ: ಪೇಡೆನಗರಿಯ ಖಾಸಗಿ ಸಂಸ್ಥೆಯಲ್ಲಿ ಕೆ.ಎ.ಎಸ್ ಪರೀಕ್ಷೆಯ ತರಬೇತಿ ಪಡೆಯುತ್ತಿದ್ದ ಯುವತಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ಇಲ್ಲಿನ ಸಪ್ತಾಪುರ ಪ್ರದೇಶದ ಖಾಸಗಿ ವಸತಿ ನಿಲಯದಲ್ಲಿದ್ದ ಬಾಗಲಕೊಟಿ ಜಿಲ್ಲೆಯ ರಬಕವಿಯ ಗೀತಾ ಲಕ್ಕಪ್ಪ ಹೆಗ್ಗಣ್ಣವರ (22) ಎಂಬುವಳೇ ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ.
ಕೆಎಎಸ್ ತರಬೇತಿ ಪಡೆಯುತ್ತಿದ್ದ ಈಕೆ ಖಾಸಗಿ ವಸತಿ ನಿಲಯದಲ್ಲಿ ವಾಸಿಸುತ್ತಿದ್ದಳು. ಇವಳ ಆತ್ಮಹತ್ಯೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ.ಘಟನಾ ಸ್ಥಳಕ್ಕೆ ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

 

administrator

Related Articles

Leave a Reply

Your email address will not be published. Required fields are marked *