ಹುಬ್ಬಳ್ಳಿ-ಧಾರವಾಡ ಸುದ್ದಿ

ಹಣಕ್ಕಾಗಿ ಪೀಡಿಸುತ್ತಿದ್ದ ರೌಡಿಶೀಟರ್ ಮಟಾಷ್:ಮರ್ಡರ ಮಾಡಿ ಠಾಣೆಗೆ ಶರಣಾದ ಸದಾನಂದ

ಹುಬ್ಬಳ್ಳಿ: ಮದ್ಯರಾತ್ರಿ ರೌಡಿಶೀಟರ್‌ನೋರ್ವನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಅರವಿಂದನಗರದ ಪಿಎನ್ ಟಿ ಕ್ವಾಟರ್ಸ್ ಬಳಿ ನಡೆದಿದೆ.
ತೊರವಿಹಕ್ಕಲದ ನಿವಾಸಿ ಅಕ್ಬರ ಅಲ್ಲಾಭಕ್ಷ್ಯ ಮುಲ್ಲಾ ಎಂಬಾತನೇ ಕೊಲೆಯಾದ ರೌಡಿಶೀಟರ್ ಆಗಿದ್ದು, ಮುಖದ ಗುರುತು ಸಿಗದಂತೆ ಮಚ್ಚಿನಿಂದ ಸಿಕ್ಕ ಸಿಕ್ಕಲ್ಲಿ ಹಲ್ಲೆ ಮಾಡಲಾಗಿದೆ.
ಸದಾನಂದ ಬುರ್ಲಿ ಎಂಬಾತನೇ ಕೊಲೆ ಮಾಡಿ ಹಳೇ ಹುಬ್ಬಳ್ಳಿ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿರುವುದಾಗಿ ಸರಂಡರ್ ಆಗಿದ್ದಾನೆ.
ಅಕ್ಬರ್ ಮುಲ್ಲಾ ಪದೆ ಪದೇ ಹಣ ನೀಡುವಂತೆ ಪೀಡಿಸುತ್ತಿದ್ದ. ಅಲ್ಲದೇ ಹಿಂದೆ ಎರಡು ಬಾರಿ ಕೊಟ್ಟ ಹಣವನ್ನು ಕೊಟ್ಟಿರಲಿಲ್ಲ.ಹಾಗಾಗಿ ಹಣ ಕೊಡುವುದಾಗಿ ಹೇಳಿ ಕರೆದುಕೊಂಡು ಬಂದು ಕೊಲೆ ಮಾಡಿರುವುದಾಗಿ ಹಳೇ ಹುಬ್ಬಳ್ಳಿ ಪೊಲೀಸರೆದುರು ಹೇಳಿಕೆ ನೀಡಿದ್ದಾನೆನ್ನಲಾಗಿದೆ.
ಉಪನಗರ ಠಾಣೆ ವ್ಯಾಪ್ತಿಯ ಲಕ್ಷ್ಮಿ ವೇ ಬ್ರಿಜ್ ಬಳಿಯ ಬಾರೊಂದರಲ್ಲಿ
ಶಿರಡಿನಗರದ ರಮೇಶ ನೀರಗಟ್ಟಿ ಹಾಗೂ ಇಂದಿರಾನಗರದ ನವೀನ್ ಎಂಬುವವರೊಂದಿಗೆ ಕೊಲೆಯಾದ ಅಲ್ಲಾಭಕ್ಷ್ಯ,ಸದಾನಂದ ಎಲ್ಲರೂ ಕೂಡಿ ಪಾರ್ಟಿ ಮಾಡಿದ್ದು, ಅಲ್ಲಿಯೇ ಮಾತಿಗೆ ಮಾತು ಬೆಳೆದಿತ್ತು. ತದನಂದರ ಮನೆಗೆ ತೆರಳುವುದಾಗಿ ಹೋದ ನಂತರ ಈ ಘಟನೆ ಘಟನೆ ರಾತ್ರಿ ೧೧.೩೦ ರಿಂದ ೧೨ ಗಂಟೆಯೊಳಗೆ ನಡೆದಿದೆ.
ಹುಬ್ಬಳ್ಳಿಯ ಹೊಸೂರಿನಲ್ಲಿದ್ದ ಅಕ್ಬರ ಹಲವು ವರ್ಷಗಳ ಹಿಂದೆ ಅರವಿಂದ ನಗರದ ಬಳಿ ಮನೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಕೊಲೆ ಮಾಡಿ ಶರಣಾದ ಸದಾನಂದನ ವಿಚಾರಣೆ ಮುಂದುವರಿದಿದೆ ಎಂದು ಎಸಿಪಿ ಆರ್.ಕೆ.ಪಾಟೀಲ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *