ಹುಬ್ಬಳ್ಳಿ-ಧಾರವಾಡ ಸುದ್ದಿ
ಪತ್ನಿ ಕಳಿಸದಿದ್ದಕ್ಕೆ ವಿಷ ಸೇವಿಸಿದ ಪತಿ

ಪತ್ನಿ ಕಳಿಸದಿದ್ದಕ್ಕೆ ವಿಷ ಸೇವಿಸಿದ ಪತಿ

ಧಾರವಾಡ: ತವರು ಮನೆಯವರು ಪತ್ನಿಯನ್ನು ಕಳುಹಿಸಲಿಲ್ಲವೆಂದು ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ
ಘಟನೆ ತಾಲೂಕಿನ ಚಂದನಮಟ್ಟಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ತಾಲೂಕಿನ ಮನಗುಂಡಿ ಗ್ರಾಮದ ಮಲ್ಲೇಶಪ್ಪ ಶಿವಪ್ಪ ಸುರಪುರ (40) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡನಾಗಿದ್ದಾನೆ.
ಮಲ್ಲೇಶಪ್ಪ, ತನ್ನ ಪತ್ನಿಯ ತವರೂರು ಚಂದನಮಟ್ಟಿಗೆ ಹೋಗಿದ್ದನು. ತನ್ನ ಪತ್ನಿಯನ್ನು ತನ್ನೊಂದಿಗೆ ಕಳುಹಿಸದೇ ಹೋದುದಕ್ಕೆ ಬೇಸತ್ತು ಅಲ್ಲಿಯೇ ವಿಷ ಸೇವಿಸಿದ್ದನು. ತೀವ್ರ ಅಸ್ವಸ್ಥನಾಗಿದ್ದ ಈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಕೊನೆಯುಸಿ ರೆಳೆದಿದ್ದಾನೆ. ಈ ಕುರಿತು ಗ್ರಾಮೀಣ ಎಎಸ್‌ಐ ಎಫ್.ಎಂ. ಮಂಟೂರ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *