ಹುಬ್ಬಳ್ಳಿ-ಧಾರವಾಡ ಸುದ್ದಿ

ಕಾಲೇಜ್ ಚೇರಮನ್‌ನಿಂದ ನಿರ್ದೇಶಕರಿಗೆ ಜೀವಬೆದರಿಕೆ

ಚಾಕುವಿನಿಂದ ಇರಿಯಲು ಯತ್ನ

ಹುಬ್ಬಳ್ಳಿ : ನಗರದ ಇಂಪಲ್ಸ್ ಕಾಲೇಜಿನ ಚೇರಮನ್ ಅದೇ ಕಾಲೇಜಿನ ನಿರ್ದೇಶಕರೊಬ್ಬರಿಗೆ ಜೀವಬೆದರಿಕೆ ಹಾಕಿ ಚಾಕುವಿನಿಂದ ಇರಿಯಲು ಯತ್ನಿಸಿದ ಪ್ರಕರಣ ವರದಿಯಾಗಿದೆ.ದಿ.13ರಂದು ರಾತ್ರಿ 7-45ರ ಸುಮಾರಿಗೆ ಈ ಘಟನೆ ನಡೆದಿದ್ದು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ( 0036/2022) ದಾಖಲಾಗಿದೆ.
ಇಂಪಲ್ಸ್ ಕಾಲೇಜಿನ ಚೇರಮನ್ ಮದುಸೂಧನ ವಶಿಷ್ಠ ಎಂಬುವವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆಂದು ನಿರ್ದೇಶಕರಾದ ಪ್ರಶಾಂತ ಲೋಕಾಪುರ ದೂರಿನಲ್ಲಿ ಹೇಳಿದ್ದಾರೆ.
ದಿ.13ರಂದು ಇಂಪಲ್ಸ್ ಕಾಲೇಜಿನಲ್ಲಿ ಶಿಕ್ಷಕರ ಸನ್ಮಾನ ಕಾರ್ಯಕ್ರಮವಿದೆ ಎಂದು ತಾವು ಸಾಯಂಕಾಲ 5-45ರ ಸುಮಾರಿಗೆ ತಮ್ಮ ಪತ್ನಿಯೊಂದಿಗೆ ಹೋದಾಗ ನಿನಗೆ ಬಿಲ್ಡಿಂಗನಲ್ಲೇ ಓಡಾಡಿಸಿ ಹೊಡೆದಿದ್ದೇನೆ.ನಿನ್ನನ್ನು ನೋಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿದ್ದಲ್ಲದೇ ತದನಂತರ ಈ ಬಗ್ಗೆ ಕೇಳಲು ಕಾರ್ಯಕ್ರಮ ಮುಗಿದ ನಂತರ ಚೇರಮನ್ ಕಚೇರಿಗೆ ಹೋದ ಸಂದರ್ಭದಲ್ಲಿ ಮದುಸೂಧನ ತಮ್ಮ ಕೋಟಿನಿಂದ ಚಾಕುವನ್ನು ತೆಗೆದು ಇರಿಯಲು ಬಂದಾಗ ತಮ್ಮ ಪತ್ನಿ ಹಾಗೂ ಆರೋಪಿತನ ಪತ್ನಿ ಸೇರಿ ಬಿಡಿಸಿರುವುದಾಗಿ ದೂರಿನಲ್ಲಿ ಲೋಕಾಪುರ ತಿಳಿಸಿದ್ದಾರೆ.
ಹಲ್ಲೆಗೆ ಮುಂದಾದ ಮದುಸೂಧನ ಹಾಗೂ ಲೋಕಾಪುರ ಇಬ್ಬರೂ ಓಂ ಶ್ರೀ ಅಪಾರ್ಟಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *