ಹುಬ್ಬಳ್ಳಿ-ಧಾರವಾಡ ಸುದ್ದಿ

ಸುಪರ್ ಮಾರ್ಕೆಟ್‌ಲ್ಲಿ ತೆರವು ಕಾರ್ಯಾಚರಣೆ ಅತಿಕ್ರಮಣ ಮಾಡಿದವರಿಗೆ ಪಾಲಿಕೆ ಶಾಕ್

ಧಾರವಾಡ: ಇಲ್ಲಿನ ಸುಪರ್ ಮಾರ್ಕೆಟ್‌ನಲ್ಲಿ ರಸ್ತೆ ಅತಿಕ್ರಮಿಸಿದ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಇಂದು ಕೈಕೊಂಡರು.
ಬೆಳಗ್ಗೆಯೇ ಸೂಪರ್ ಮಾರುಕಟ್ಟೆಯಲ್ಲಿ ಜೆಸಿಬಿಗಳ ಮೂಲಕ ಅಧಿಕಾರಿಗಳು ತೆರವು ಮುಂದಾದರು. ಈ ಸಂದರ್ಭದಲ್ಲಿ ಕೆಲವು ಅಂಗಡಿಕಾರರು ತೆರವು ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರು.
ಪಾಲಿಕೆ ಜಾಗ ಅತಿಕ್ರಮಿಸಿದ ಅಂಗಡಿಗಳ ಮಾಲಿಕರಿಗೆ ಈ ಮುಖಾಂತರ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದರು.
ಅಂಗಡಿಕಾರರಿಗೆ ತಮ್ಮ ಅಂಗಡಿಗಳನ್ನು ತೆರವುಗೊಳಿಸಿಕೊಳ್ಳುವಂತೆ ಈಗಾಗಲೇ ಎಂದು ನೋಟಿಸ್ ನೀಡಲಾಗಿದೆ. ಆದರೂ ಅಂಗಡಿಕಾರರು ತೆರವುಗೊಳಿಸಿಕೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಾಲಿಕೆ ವತಿಯಿಂದ ತೆರವುಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಬಳಿಕ ಅಂಗಡಿಕಾರರು ಸ್ವಯಂಪ್ರೇರಣೆಯಿಂದ ತಮ್ಮ ಅಂಗಡಿಗಳನ್ನು ತೆರವುಗೊಳಿಸಿಕೊಳ್ಳಲು ಒಪ್ಪಿದರು. ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಕೈಕೊಳ್ಳಲಾಗಿತ್ತು.

 

administrator

Related Articles

Leave a Reply

Your email address will not be published. Required fields are marked *