ಹುಬ್ಬಳ್ಳಿ-ಧಾರವಾಡ ಸುದ್ದಿ
ರಸ್ತೆ ಅಪಘಾತ: ನವಲೂರಿನ ತಾಯಿ, ಮಗ ಸಾವು

ರಸ್ತೆ ಅಪಘಾತ: ನವಲೂರಿನ ತಾಯಿ, ಮಗ ಸಾವು

ಅಣ್ಣಿಗೇರಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 67ರ ಅಣ್ಣಿಗೇರಿ-ಗದಗ ಮಧ್ಯೆ ಬರುವ ದುಂದೂರು ಕ್ರಾಸ್ ಸಮೀಪದಲ್ಲಿ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ತಾಯಿ, ಮಗ ಇಬ್ಬರು ಮೃತಪಟ್ಟ ಘಟನೆ ಸೋಮವಾರ ರಾತ್ರಿ ಜರುಗಿದೆ.
ಅಪಘಾತದಲ್ಲಿ ಅಭಿಷೇಕ್ ಬಸಪ್ಪ ಸಂಗಣ್ಣವರ(23) ಮತ್ತು ತಾಯಿ ಈರವ್ವ ಬಸಪ್ಪ ಸಂಗಣ್ಣವರ(42) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.


ತಾಯಿ ಹಾಗೂ ಮಗ ಇಬ್ಬರು ಯಲಬುರ್ಗಾದಿಂದ ಮದುವೆ ಸಮಾರಂಭ ಮುಗಿಸಿಕೊಂಡು ವಾಪಸ್ ಬರುವ ವೇಳೆ ಮಳೆ ಗಾಳಿಗೆ ಮೋಟಾರ್ ಸೈಕಲ್(ಕೆಎ25, ಕ್ಯೂ5459) ಸ್ಕಿಡ್ ಆಗಿ ನಂತರ ಮಳೆ ಗಾಳಿಗೆ ತಪ್ಪಿಸಿ ಕೊಳ್ಳಲು ಪಕ್ಕದಲ್ಲಿರುವ ಕೆಎನ್‌ಆರ್ ಕಟ್ಟಡದತ್ತ ಹೋಗುವಾಗ ಯಾವುದೋ ವಾಹನ ಅಪಘಾತ ಪಡಿಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರು ಧಾರವಾಡ ತಾಲೂಕಿನ ನವಲೂರ ಗ್ರಾಮದವರಾಗಿದ್ದು, ಈರವ್ವ ಎಸ್‌ಡಿಎಂ ಆಸ್ಪತ್ರೆಯ ಸಿಬ್ಬಂದಿ ಎನ್ನಲಾಗಿದೆ. ಮೃತ ಈರವ್ವಳ ಪತಿ ಬಸಪ್ಪ ಅವರು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ಥಳಕ್ಕೆ ಪ್ರಭಾರಿ ಸಿಪಿಐ ವೈ.ಡಿ. ಅಗಸಿಮನಿ, ಅಣ್ಣಿಗೇರಿ ಪೊಲೀಸ್ ಠಾಣಾಧಿ ಕಾರಿ ಎಲ್.ಕೆ. ಜೂಲಕಟ್ಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *