ಬಿಜಪಿ ಶಾಸಕರಿಗೆ ತಕ್ಕ ಪಾಠ : ಮುತಾಲಿಕ ಎಚ್ಚರಿಕೆ
ಹುಬ್ಬಳ್ಳಿ: ಮಸೀದಿ, ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ಸ್ಪೀಕರ್ ಬಳಕೆ ವಿಚಾರದಲ್ಲಿ ಸರ್ಕಾರಕ್ಕೆ ನೀಡಿದ ಗಡುವು ಮುಗಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನಿವಾಸದ ಮುಂದೆ ಇಂದು ಶ್ರೀರಾಮ ಸೇನೆಯಿಂದ ಧರಣಿ, ಸತ್ಯಾಗ್ರಹ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಬಿಜೆಪಿ ಜಯಗಳಿಸಿದ್ದೆ ಹಿಂದೂಗಳಿಂದ ಆದರೆ ಹಿಂದೂಗಳು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಯಾಕೆ ಕಿವಿ ಮುಚ್ಚಿ ಕುಳಿತುಕೊಂಡಿದ್ದಾರೆಂಬುದು ತಿಳಿಯುತ್ತಿಲ್ಲ. ಕೂಡಲೇ ಈಗಾಗಲೇ ಹೊರಡಿಸಿದ ಸುತ್ತೋಲೆಯನ್ನು ಜಾರಿಗೊಳಿಸಬೇಕು. ಇಲ್ಲದೇ ಹೋದರೆ ಹೋರಾಟ ನಿಶ್ಚಿತ ಎಂದು ಶೆಟ್ಟರ್ ಅವರ ಆಪ್ತ ಸಹಾಯಕರಿಗೆ ಮನವಿ ಅರ್ಪಿಸಿದರು.
ಧ್ವನಿವರ್ಧಕ ನಿರ್ಬಂಧ ಕುರಿತು ರಾಜ್ಯ ಸರ್ಕಾರ ಅಧಿಕೃತವಾಗಿ ಸುತ್ತೋಲೆ ಪ್ರಕಟಿಸಿ. ಮೈಕ್ ಬಳಸಲು ಧಾರ್ಮಿಕ ಕೇಂದ್ರಗಳು ಅನುಮತಿ ಪಡೆಯ ಬೇಕು. ರಾತ್ರಿ ೧೦ ಗಂಟೆ ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿಯಮ ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಹಿನ್ನಲೆಯಲ್ಲಿ ಗಡುವು ನೀಡಲಾಗಿತ್ತು. ನಿಯಮಗಳು ಜಾರಿಯಾಗಿಲ್ಲ. ಸರ್ಕಾರದ ಸುತ್ತೋಲೆ ಕಸದ ಬುಟ್ಟಿಗೆ ಸೇರಿವೆ ಆಕ್ರೋಶ ವ್ಯಕ್ತಪಡಿಸಿದರು.
ಯೋಗಿ ಆದಿತ್ಯನಾಥರನ್ನು ನೆನಪಿಸಿಕೊಳ್ಳಿ ಎಂದ ಮುತಾಲಿಕ್ ಬಿಜೆಪಿ ಶಾಸಕರಿಗೆ ಸಂಘ ಬೇಕು, ಸಂಘದ ಸಿದ್ದಾಂತ ಬೇಡ,ಹಿಂದೂಗಳು ಬೇಕು ಹಿಂದುತ್ವ ಬೇಡ ಯಾರೊಬ್ಬರು ಬಾಯಿ ಬಿಡ್ತಾ ಇಲ್ಲ. ನಿಮ್ಮ ಮೌನ ಸರಿಯಲ್ಲ, ನಿಮ್ಮನ್ನು ಗೆಲ್ಲಿಸಿದ್ದು ಯಾಕೆ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದರು.
ಬಿಜೆಪಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ್ತಿವಿ ಎಂದ ಮುತಾಲಿಕ್ ಎಲ್ಲಾ ವಿಷಯದಲ್ಲೂ ನಾವೇ ಮಾತನಾಡಿ ನಾವೇ ಕೇಸ್ ಹಾಕಿಸಿಕೊಳ್ಳಬೇಕು.ನೀವು ಯಾಕೆ ಇದ್ದೀರಿ ಎಂದು ಪ್ರಶ್ನಿಸಿದರು. ಧರಣಿಯಲ್ಲಿ ಅಣ್ಣಪ್ಪ ದಿವಟಗಿ, ಬಸವರಾಜ ದುರ್ಗದ, ಚಿದು ಕಲಾಲ ಸೇರಿದಂತೆ ಅನೇಕರಿದ್ದರು.