ಹುಬ್ಬಳ್ಳಿ-ಧಾರವಾಡ ಸುದ್ದಿ
ಕಿಡ್ನ್ಯಾಪ್ : ಪಾಲಿಕೆ ಸದಸ್ಯ ಚೇತನ ಸೇರಿ ಮೂವರು ವಶಕ್ಕೆ

ಕಿಡ್ನ್ಯಾಪ್ : ಪಾಲಿಕೆ ಸದಸ್ಯ ಚೇತನ ಸೇರಿ ಮೂವರು ವಶಕ್ಕೆ

ಆಸ್ಪತ್ರೆಗೆ ದಾಖಲಾದ ಶಿವು ಪತ್ನಿ

ಹುಬ್ಬಳ್ಳಿ: ಮಗಳ ಅಪಹರಣ ಮಾಡಿದ ಪ್ರಕರಣದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವು ಹಿರೇಕೆರೂರ ಹಾಗೂ ಅವರ ಪತ್ನಿ ಜಯಲಕ್ಷ್ಮಿ, ಹಾಲಿ ಸದಸ್ಯ ಚೇತನ ಹಿರೇಕೆರೂರ, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವು ಹಿರೇಕೆರೂರ ಅವರು ಮಗಳು ಸಹನಾ ನಿಖಿಲ್ ದಾಂಡೇಲಿ ಎಂಬುವವರನ್ನ ಪ್ರೇಮಿಸಿ ಮದುವೆಯಾಗಿದ್ದರು. ಅದಾದ ಕೆಲವು ದಿನಗಳ ನಂತರ ಹುಬ್ಬಳ್ಳಿಯಲ್ಲಿ ಆರತಕ್ಷತೆಗೆ ನಿರ್ಧರಿಸಿದ್ದ ಸಮಯದಲ್ಲಿ ತನ್ನ ಪತ್ನಿಯನ್ನ ಅಪಹರಣ ಮಾಡಿದ್ದಾರೆಂದು ನಿಖಿಲ್ ದೂರು ನೀಡಿದ್ದರು.


ಘಟನೆಯ ನಂತರ ಆಕೆಯನ್ನ ಗೋವಾದಿಂದ ತಂದೆ-ತಾಯಿಗಳ ಜೊತೆಗೆ ಕರೆದುಕೊಂಡು ಬರಲಾಗಿತ್ತು. ನಂತರ ಶಿವು ಹಿರೇಕೆರೂರ ಮಗಳು, ತನ್ನ ತಂದೆ-ತಾಯಿ ಅಪಹರಣ ಮಾಡಿಲ್ಲವೆಂದು ಹೇಳಿಕೆ ನೀಡಿದ್ದರು. ಅಲ್ಲದೇ ಚಿಕ್ಕಪ್ಪನ ಮಗ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಕಾರಣ ಎಂದು ಹೇಳಿಕೆ ನೀಡಿದ್ದರು. ಇದರಿಂದ ಮತ್ತೆ ಗೊಂದಲ ಸೃಷ್ಟಿಯಾಗಿತ್ತು. ಪಾಲಿಕೆ ಸದಸ್ಯ ಚೇತನ ಪಾಲಿಕೆ ಸಭೆಗೂ ಹಾಜರಾಗದೇ ಗೈರಾಗಿದ್ದರು.
ಈಗ ಪ್ರಕರಣದಲ್ಲಿ ಮೂವರನ್ನು ಗೋಕುಲ ಠಾಣೆ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ವಶಕ್ಕೆ ಪಡೆದ ಸಮಯದಲ್ಲಿ ಶಿವು ಹಿರೇಕೆರೂರ ಪತ್ನಿ ಜಯಲಕ್ಷ್ಮೀ ಅಸ್ವಸ್ಥಗೊಂಡಿದ್ದು, ಅವರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.

 

 

administrator

Related Articles

Leave a Reply

Your email address will not be published. Required fields are marked *