ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡದ ಯುವಕ ಆತ್ಮಹತ್ಯೆ

ಧಾರವಾಡದ ಯುವಕ ಆತ್ಮಹತ್ಯೆ

ಧಾರವಾಡ: ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಮದಿಹಾಳ ಪ್ರದೇಶದಲ್ಲಿ ನಡೆದಿದೆ.
ಕಾರ್ತಿಕ ಹಿರೇಮಠ ಎಂಬುವನೇ ನೇಣಿಗೆ ಶರಣಾದ ಯುವಕ.


ನಿನ್ನೆ ರಾತ್ರಿ ಮಲಗಲು ಹೋದ ಕಾರ್ತಿಕ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಗಿನ ಜಾವ ಮನೆಯವರಿಗೆ ವಿಷಯ ಗೊತ್ತಾಗಿದೆ. ಕೆಲ ದಿನಗಳ ಹಿಂದೆ ತಂದೆ ಕಳೆದುಕೊಂಡಿದ್ದ ಕಾರ್ತಿಕ, ಕುಡಿತದ ಚಟಕ್ಕೆ ಸಿಲುಕಿದ್ದನು ಎಂದು ತಿಳಿದು ಬಂದಿದೆ. ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *