ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ

ಹುಬ್ಬಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ

ರಸ್ತೆ ಅಪಘಾತದಲ್ಲಿ ಮೈದುನ, ಕಿಮ್ಸ್ ಆಸ್ಪತ್ರೆಯಲ್ಲಿ ಅತ್ತಿಗೆ ಸಾವು

ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತಿಗೆ ಹಾಗೂ ಮೈದುನ ಇಬ್ಬರೂ ಮೃತಪಟ್ಟ ಹೃದಯವಿದ್ರಾವಕ ಘಟನೆ ನಗರದಲ್ಲಿಂದು ಬೆಳ್ಳಂಬೆಳ್ಳಿಗೆ ಸಂಭವಿಸಿದೆ.
ಹಳೇಹುಬ್ಬಳ್ಳಿ ಬೀರಬಂದ ಓಣಿಯ ಹನಿಬಾಬಿ ಹಾಗೂ ಮೈದುನ ಪೈರೋಜ ಧಾರವಾಡ ಎಂಬುವರೇ ಮೃತಪಟ್ಟ ಅತ್ತಿಗೆ-ಮೈದುನರಾಗಿದ್ದಾರೆ.


ಹಳೇಹುಬ್ಬಳ್ಳಿಯ ಬೀರಬಂದ ಓಣಿಯ ಹನಿಬಾಬಿ ಎಂಬುವರಿಗೆ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದ್ದು, ತಕ್ಷಣವೇ ಅವರನ್ನು ಸಂಬಂಧಿಕರೊಂದಿಗೆ ಕಿಮ್ಸ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಅಲ್ಲಿಗೆ ಹೋಗುವುದರಲ್ಲಿ ಆಕೆ ಚಿಕಿತ್ಸೆ ಸ್ಪಂದಿಸುವ ಮುನ್ನವೇ ಸಾವಿಗೀಡಾಗಿದ್ದಾರೆ.

ಕಿಮ್ಸನಲ್ಲಿ ಈ ಘಟನೆ ನಡೆಯುತ್ತಿದ್ದಾಗಲೇ ನಗರದ ಹೊಸೂರ ಸರ್ಕಲ್ ಬಳಿ ಟಿಪ್ಪರ್ ಡಿಕ್ಕಿ ಹೊಡೆದಿದ್ದರಿಂದ ಬೈಕಿನಲ್ಲಿ ಬರುತ್ತಿದ್ದ ಹನಿಬಾಬಿಯ ಮೈದುನ ಪೈರೋಜ ಧಾರವಾಡ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಬೀರಬಂದ ಓಣಿಯಲ್ಲಿ ಘಟನೆಯ ಮಾಹಿತಿ ಗೊತ್ತಾಗುತ್ತಿದ್ದ ಹಾಗೇ ಸಂಬಂಧಿಕರು, ಸ್ಥಳೀಯರು ಕಿಮ್ಸಗೆ ದೌಡಾಯಿದ್ದಾರೆ. ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

administrator

Related Articles

Leave a Reply

Your email address will not be published. Required fields are marked *