ಹುಬ್ಬಳ್ಳಿ-ಧಾರವಾಡ ಸುದ್ದಿ
ಬಡ್ಡಿ ಕುಳಗಳು ಗೋವಾಕ್ಕೆ ಪರಾರಿ?

ಬಡ್ಡಿ ಕುಳಗಳು ಗೋವಾಕ್ಕೆ ಪರಾರಿ?

ಹು.ಧಾ.ಮಧ್ಯದ ರೆಸಾರ್ಟನಲ್ಲಿ ಇರುವ ಶಂಕೆ

ಹುಬ್ಬಳ್ಳಿ : ಕೇಶ್ವಾಪುರ ವ್ಯಾಪ್ತಿಯ ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿ ಎಳೆದಾಡಿ ಜೀವ ಬೆದರಿಕೆ ಹಾಕಿದ ಬಡ್ಡಿಕುಳಗಳು ಗೋವಾದಲ್ಲಿ ತಲೆಮರೆಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಕಳೆದ ದಿ. 29ರಂದು ಘಟನೆ ನಡೆದ ನಂತರ ಶ್ರೀಮತಿ ರೇಣು ಕಿರಣ ಮಾಗಡಿ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಬೆದರಿಕೆ ಹಾಕಿದ್ದ ವಿದ್ಯಾನಗರ ನಿವಾಸಿ ರಾಜೇಶ ಮೆಹರವಾಡೆ, ಮೋಹಿತ ಮೆಹರವಾಡೆ, ಅನಿಲ ಮೆಹರವಾಡೆ, ನಾರಾಯಣ ಮೆಹರವಾಡೆ ಮೊಬೈಲ್ ಸ್ವಿಚ್ ಮಾಡಿ ಪರಾರಿಯಾಗಿದ್ದು ಮೊಬೈಲ್‌ಲ್ಲಿನ ಸ್ಟೇಟಸ್, ಬಿಪಿ, ಫೇಸಬುಕ್‌ಗಳಲ್ಲಿನ ಇವರ ಪೋಟೋಗಳು ಮಾಯವಾಗಿವೆ.


ದೂರು ದಾಖಲಾದ ತಕ್ಷಣ ಕೇಶ್ವಾಪುರ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ಹಾಗೂ ಸಿಬ್ಬಂದಿ ಮಹಿಳೆ ಮೇಲೆ ಹಾಡು ಹಗಲೇ ಹಲ್ಲೆ ಮಾಡಿದ ಮೆಹರವಾಡೆ ಸೋದರರಿಗಾಗಿ ಜಾಲ ಬೀಸಿದ್ದರೂ ನಿನ್ನೆ ಹಾಗೂ ಮೊನ್ನೆ ರಾಹುಲ್ ಪ್ರವಾಸದ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಕಾರಣ ಸ್ಥಗಿತಗೊಂಡಿತ್ತು. ಇಂದಿನಿಂದ ಮತ್ತೆ ಇವರ ಹುಡುಕಾಟ ಆರಂಭಿಸಿದ್ದಾರೆನ್ನಲಾಗಿದೆ.


ಇವರು ಗೋವಾಕ್ಕೆ ಹೋಗಿಲ್ಲವಾಗಿದ್ದು ಅವಳಿನಗರದ ಮಧ್ಯೆ ರೆಸಾರ್ಟವೊಂದರಲ್ಲಿ ಆಶ್ರಯ ಪಡೆದಿದ್ದಾರೆಂಬ ಗುಸು ಗುಸು ಹರಿದಾಡಲಾರಂಭಿಸಿದೆ.
ಇತ್ತೀಚಿನ 2-3 ಪ್ರಕರಣದ ಹಿನ್ನೆಲೆಯಲ್ಲಿ ಖಡಕ್ ಐಪಿಎಸ್ ಲಾಭೂರಾಮ್ ಸಹ ವಿಶೇಷ ನಿಗಾ ವಹಿಸಿದ್ದು ಅವಳಿನಗರದ ಮೀಟರ್ ಬಡ್ಡಿ ಮಾಫಿಯಾದ ಬಗ್ಗೆ ಸಮಗ್ರ ವಿವರ ನೀಡಲು ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

 

administrator

Related Articles

Leave a Reply

Your email address will not be published. Required fields are marked *