ಹುಬ್ಬಳ್ಳಿ-ಧಾರವಾಡ ಸುದ್ದಿ

ಪರೀಕ್ಷಿತ ಮತ್ತೊಂದು ದ್ವಿಶತಕ

ಹುಬ್ಬಳ್ಳಿ : ಸ್ಥಳೀಯ ಮೂರುಸಾವಿರಮಠ ಕಲಾ ಮತ್ತು ವಾಣಿಜ್ಯ ಕಾಲೇಜಿನ ಬಿ.ಎ.ಮೊದಲನೆ ವರ್ಷದ ವಿದ್ಯಾರ್ಥಿ ಹಾಗೂ ಧಾರವಾಡದ ವಲಯದ ಆರಂಭಕಾರ ಪರೀಕ್ಷಿತ ವಕ್ಕುಂದ ಬೆಂಗಳೂರಿನಲ್ಲಿ ನಡೆದಿರುವ 25 ವರ್ಷದೊಳಗಿನವರ ಎಸ್.ಎ.ಶ್ರೀನಿವಾಸನ್ ಸ್ಮರಣಾರ್ಥ ಅಂತರ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎರಡನೇ ದ್ವಿಶತಕ ಬಾರಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.


ಮಂಗಳೂರು ವಲಯದ ವಿರುದ್ಧದ ಪಂದ್ಯದಲ್ಲಿ ಆರಂಭಕಾರನಾಗಿ ಅಂಕಣಕ್ಕಿಳಿದ ಪರೀಕ್ಷಿತ 269 ಎಸೆತಗಳನ್ನೆದುರಿಸಿ 31 ಬೌಂಡರಿಗಳ ನೆರವಿನಿಂದ ಅಜೇಯ 215 ಪರಿಣಾಮ ಧಾರವಾಡ ವಲಯ 6 ವಿಕೆಟ್ ನಷ್ಟಕ್ಕೆ 485 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಹುಬ್ಬಳ್ಳಿ ಸ್ಪೋರ್ಟ್ಸ ಕ್ಲಬ್ಬಿನ ಆಟಗಾರ ಆಕಾಶ ಪತ್ತಾರ ೮೮ ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ ಅಜೇಯ 117೭ ರನ್‌ಗಳ ಮಹತ್ವದ ಕಾಣಿಕೆ ನಡೆದರು.
ಇದೇ ಪಂದ್ಯಾವಳಿಯ ರಾಯಚೂರಿನ ಪಂದ್ಯದಲ್ಲೂ ಪರೀಕ್ಷಿತ ವಕ್ಕುಂದ ದ್ವಿಶತಕ ಬಾರಿಸಿದ್ದು,ಎರಡು ದ್ವಿಶತಕಗಳೊಂದಿಗೆ 5 ಪಂದ್ಯಗಳಲ್ಲಿ ಒಟ್ಟು 659 ರನ್ನುಗಳನ್ನು ಗಳಿಸಿದ್ದಾರೆ
ಪರೀಕ್ಷಿತನ ಅದ್ಬುತ ಸಾಧನೆ ಮತ್ತು ಆಕಾಶನ ಹೊಡೆ ಬಡಿಯ ಶತಕಕ್ಕೆ ವಲಯ ಚೇರ್ಮನ್ ವೀರಣ್ಣ ಸವಡಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *