ಹುಬ್ಬಳ್ಳಿ-ಧಾರವಾಡ ಸುದ್ದಿ

ಝೀರೊ ಪ್ಲಸ್ ಹುಬ್ಬಳ್ಳಿ ಆವೃತ್ತಿ ಲೋಕಾರ್ಪಣೆ

ಹುಬ್ಬಳ್ಳಿ: ಝೀರೋ ಪ್ಲಸ್ ವಾರಪತ್ರಿಕೆಯ ದಶಮಾನೋತ್ಸವ ಹಾಗೂ ಹುಬ್ಬಳ್ಳಿ ಆವೃತ್ತಿಯನ್ನು ಪತ್ರಕರ್ತರ ಭವನದಲ್ಲಿ ರವಿವಾರ ನಡೆದ ಸರಳ ಸಮಾರಂಭದಲ್ಲಿ ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪತ್ರಿಕೆ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳಿಗೆ ಕೈಗನ್ನಡಿಯಾಗಲಿ ಅಲ್ಲದೇ ಯಶಸ್ವಿಯಾಗಲಿ ಎಂದು ಹಾರೈಸಿದರು. ಹುಬ್ಬಳ್ಳಿ ಅಯ್ಯಪ್ಪ ಸ್ವಾಮಿ ಮಂದಿರದ ಅನಂದ ಗುರುಸ್ವಾಮಿ ಹಾಗೂ ಹಿರಿಯ ಪತ್ರಕರ್ತ ಅಕ್ಬರ ಬೆಳಗಾಂವಕರ ಅವರನ್ನು ಈ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು.


ಸಂಪಾದಕ ಲೋಚನೇಶ್ ಹೂಗಾರ ಸ್ವಾಗತಿಸಿ ಪತ್ರಿಕೆಯ ಆಶಯ, ಉದ್ದೇಶ ವಿವರಿಸಿ ಶೂನ್ಯದಿಂದ ಸಾಧನೆ ಮಾಡಿದವರ ಗುರುತಿಸಿ ಬೆಳಕಿಗೆ ತರುವ ಯತ್ನ ಇದಾಗಿದೆ ಎಂದರು.
ಪಂಜುರ್ಲಿ ಸಮೂಹದ ರಾಜೇಂದ್ರ ಶೆಟ್ಟಿ, ಪ್ರಕಾಶ ಶೆಟ್ಟಿ, ಹೂಗಾರ ವಿವಿಧೋದ್ದೇಶ ಸಹಕಾರಿ ಉಪಾಧ್ಯಕ್ಷ ಸುರೇಶ ಹೂಗಾರ, ನಿರ್ದೇಶಕ ನಾಗರಾಜ ಸಂಗಳಕರ ಸೇರಿದಂತೆ ಅನೇಕ ಗಣ್ಯರು, ವಿವಿಧ ಮಾಧ್ಯಮಗಳ ಪ್ರಮುಖರು ಉಪಸ್ಥಿತರಿದ್ದು ಶುಭ ಹಾರೈಸಿದರು.

administrator

Related Articles

Leave a Reply

Your email address will not be published. Required fields are marked *