ಹುಬ್ಬಳ್ಳಿ-ಧಾರವಾಡ ಸುದ್ದಿ

‘ವಿಕೆ ಬಾಸ್’ ಡೈರಿಗೆ ‘ಡಿ ಬಾಸ್’ ಭೇಟಿ

ಧಾರವಾಡ: ಮಾಜಿ ಸಚಿವ, ಆಪ್ತಮಿತ್ರ ವಿನಯ ಕುಲಕರ್ಣಿ ಅವರ ಕರ್ನಾಟಕ ವಿ.ವಿ. ಸಮೀಪದ ಅತ್ತಿಕೊಳ್ಳದಲ್ಲಿರುವ ಡೇರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬೆಳಿಗ್ಗೆ ಭೇಟಿ ನೀಡಿ ಜಾನುವಾರುಗಳು ಹಾಗೂ ಕುದುರೆ ಜೊತೆ ಕೆಲ ಕಾಲ ಸಮಯ ಕಳೆದರು.


ನಿನ್ನೆ ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ ಅವರ ಪುತ್ರ ಜೈದ್ ಖಾನ ಅಭಿನಯದ “ಬನಾರಸ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ಗೆ ಆಗಮಿಸಿದ್ದ ಅವರು ಇಂದು ಮುಂಜಾನೆ ಕುಲಕರ್ಣಿ ಅವರ ಡೈರಿಗೆ ಭೇಟಿ ನೀಡಿ ಡೇರಿಯಲ್ಲಿರುವ ಡೈರಿಯಲ್ಲಿರುವ ಕುದುರೆ ಹಾಗೂ ವಿವಿಧ ತಳಿಯ ಜಾನುವಾರಗಳ ಬಗ್ಗೆ ವಿವರ ಕೇಳಿ ಪಡೆದರು.


ಈ ಸಂದರ್ಭದಲ್ಲಿ ಪೋನ್ ಮುಖಾಂತರ ವಿನಯ ಜೊತೆ ಮಾತ ನಾಡಿದರು. ವಿನಯ ಅವರ ಪತ್ನಿ ಶಿವಲೀಲಾ, ನಟರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *