ಹುಬ್ಬಳ್ಳಿ-ಧಾರವಾಡ ಸುದ್ದಿ
ಕೆಎಸ್‌ಸಿಎ ವಲಯದ ಅಧ್ಯಕ್ಷರಾಗಿ ವೀರಣ್ಣ ಸವಡಿ

ಕೆಎಸ್‌ಸಿಎ ವಲಯದ ಅಧ್ಯಕ್ಷರಾಗಿ ವೀರಣ್ಣ ಸವಡಿ

ಸತತ 5ನೇ ಅವಧಿಗೆ ಆಯ್ಕೆ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ವ್ಯವಸ್ಥಾಪಕ ಸಮಿತಿಯು ಮಾಜಿ ಹು.ಧಾ. ಮೇಯರ್ ವೀರಣ್ಣ ಸವಡಿ ಅವರನ್ನು ಧಾರವಾಡ ವಲಯದ ಅಧ್ಯಕ್ಷರನ್ನಾಗಿ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಿದೆ.
ಸತತ 5ನೇ ಅವಧಿಗೆ ವೀರಣ್ಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಧಾರವಾಡ ವಲಯವು ಬೆಳಗಾವಿ, ಕಾರವಾರ, ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳನ್ನು ಒಳಗೊಂಡಿದೆ.


ಧಾರವಾಡ ವಲಯವು ಪ್ರಸ್ತುತ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಎರಡು ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನ ಹೊಂದಿದೆ. ಶೀಘ್ರದಲ್ಲೇ ಗದಗ ಮತ್ತು ಕಾರವಾರದಲ್ಲಿ 2 ಉನ್ನತ ದರ್ಜೆಯ ಮೈದಾನಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ. ವೀರಣ್ಣ ಕ್ರಿಕೆಟ್ ಮೂಲ ಸೌಕರ್ಯ ಮತ್ತು ಪ್ರತಿಭೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವ್ಯವಸ್ಥಾಪಕ ಸಮಿತಿ ಮತ್ತೊಮ್ಮೆ ತಮ್ಮ ಮೇಲೆ ನಂಬಿಕೆ ಇಟ್ಟಿದ್ದು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಸವಡಿ ಹೇಳಿದ್ದಾರೆ.

administrator

Related Articles

Leave a Reply

Your email address will not be published. Required fields are marked *