ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡದಲ್ಲಿ ಸರಣಿ ಕಳ್ಳತನ

ಧಾರವಾಡದಲ್ಲಿ ಸರಣಿ ಕಳ್ಳತನ

ಧಾರವಾಡ: ಇಲ್ಲಿನ ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ನಾಲ್ಕು ಮನೆಗಳ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ನಗದು, ಚಿನ್ನ,ಬೆಳ್ಳಿ ಅಭರಣಗಳನ್ನು ದೋಚಲಾಗಿದೆ.
ಕೆಲಗೇರಿಯ ಆಂಜನೇಯ ನಗರದಲ್ಲಿನ ಎರಡು ಮತ್ತು ಮೆಹಬೂಬ ನಗರದಲ್ಲಿನ ಎರಡು ಮನೆಗಳಲ್ಲಿ ಕಳ್ಳತನವಾಗಿದೆ.
ಆಂಜನೇಯ ನಗರದ 4 ನೇ ಕ್ರಾಸ್‌ನಲ್ಲಿರುವ ಪ್ರಕಾಶ್ ದೊಡ್ಡಮನಿ ಎಂಬ ಸಿಆರ್‌ಪಿಎಫ್ ಸಿಬ್ಬಂದಿ ಮನೆಯಲ್ಲಿ ಮೊದಲು ಕಳ್ಳತನ ನಡೆದಿದ್ದು, ಇವರ ಮನೆಯಲ್ಲಿನ ಒಂದೂವರೆ ಕೆಜೆ ಬೆಳ್ಳಿ, ಚಿನ್ನದ ಆಭರಣ ಮತ್ತು 60 ಸಾವಿರ ನಗದು ದೋಚಲಾಗಿದೆ.
ಬಳಿಕ ಅದೇ ಕ್ರಾಸ್‌ನಲ್ಲಿರುವ ಶಿವನಾಗ ಆಲದಮರ ಎಂಬುವವರ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿ ಏನೂ ಸಿಗದಿದ್ದಾಗ ವಾಪಸ್ ಮರಳಿದ್ದಾರೆ. ನಂತರ 8 ನೇ ಕ್ರಾಸ್‌ನಲ್ಲಿನ ರುದ್ರಪ್ಪ ಹನಜಿ ಎಂಬುವರ ಮನೆ ಕೀಲಿ ಮುರಿದು, ಅಲ್ಮೆರಾದಲ್ಲಿನ 60ಸಾವಿರ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ.
ಮೆಹಬೂಬ ನಗರದಲ್ಲಿಯೂ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ ಎಂದು ಗೊತ್ತಾಗಿದ್ದು, ಕಳ್ಳರು ದೋಚಿದ ವಸ್ತುಗಳ ವಿವರ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಸಿಪಿಐ ರಮೇಶ ಹೂಗಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *