ಹುಬ್ಬಳ್ಳಿ-ಧಾರವಾಡ ಸುದ್ದಿ
ಕ್ಯಾಸಿನೋ ಪಾಲುದಾರನ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ ದೂರು – ಪ್ರತಿದೂರು ದಾಖಲು

ಕ್ಯಾಸಿನೋ ಪಾಲುದಾರನ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ ದೂರು – ಪ್ರತಿದೂರು ದಾಖಲು

ಹುಬ್ಬಳ್ಳಿ: ಸ್ಥಳೀಯ ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ ಬೆಂಬಲಿಗರೊಂದಿಗೆ ತಮ್ಮ ಕ್ಯಾಸಿನೋ ಪಾಲುದಾರನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದು ಉಪನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
ಗೋವಾದಲ್ಲಿನ ಡೆಲ್ಟಿನ್ ಜಾಕ್ ಕ್ಯಾಸಿನೋದಲ್ಲಿ ಹುಬ್ಬಳ್ಳಿ ರಾಮತೀರ್ಥ ಏರಸಂಗಿ ಇವರು ಕೈ ಮುಖಂಡನ ಪಾಲುದಾರರಾಗಿದ್ದಾರೆ. ನಿನ್ನೆ ರಾತ್ರಿ ಮಹಾನಗರಪಾಲಿಕೆ ಎದುರು ಗಿರೀಶ ಹಾಗೂ ರಾಮತೀರ್ಥ ನಡುವೆ ಕ್ಯಾಸೀನೋ ಹಣಕಾಸಿನ ವ್ಯವಹಾರದ ಸಂಬಂಧ ವಾಗ್ವಾದ ನಡೆದು ತಾರಕಕ್ಕೆ ಹೋಗಿದ್ದು ಗಿರೀಶ ಹಾಗೂ ಅವರ ಬೆಂಬಲಿಗರು ಹಿಗ್ಗಾ ಮುಗ್ಗಾ ಥಳಿಸಿದ್ದು ಗಾಯಗೊಂಡ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವಾಗ್ವಾದ ಪ್ರಕರಣದಲ್ಲಿ ಗಿರೀಶ ತಮ್ಮ ಮೇಲೂ ಸಹ ಹಲ್ಲೆ ನಡೆದಿದೆ ಎಂದು ಉಪನಗರ ಠಾಣೆಯಲ್ಲಿ ಪ್ರತಿ ದೂರನ್ನು ದಾಖಲಿಸಿದ್ದಾರೆ.
ನಿನ್ನೆ ಹೊಡೆದಾಟದ ಸುದ್ದಿ ತಿಳಿಯುತ್ತಿದ್ದಂತೆ ಎಸಿಪಿ ವಿನೋದ ಮುಕ್ತೆದಾರ, ಉಪನಗರ ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ, ವಿದ್ಯಾನಗರ ಪಿಐ ಮಹಾಂತೇಶ ಹೊಳಿ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಗೋವಾದ ಡೆಲ್ಟಿನ್ ಜಾಕ್ ಪಾಲುದಾರರಾಗಿ ಸೇರಿಸಿಕೊಂಡು ಗಿರೀಶ ಹುಬ್ಬಳ್ಳಿಯ ಅನೇಕರಿಗೆ ’ಕೈ’ ಎತ್ತಿದ್ದಾನೆ ಎನ್ನಲಾಗುತ್ತಿದೆ. ಅಲ್ಲದೇ ಇತ್ತೀಚೆಗೆ ಕ್ಯಾಸೀನೋ ವ್ಯವಹಾರದ ಸಂಬಂಧವೇ ಪಾಲಿಕೆ ಸದಸ್ಯರೊಬ್ಬರ ಬೆಂಬಲಿಗರು ಗಿರೀಶನ ಮನೆಗೆ ತೆರಳಿ ಧರ್ಮದೇಟು ನೀಡಿದ್ದರೆಂಬ ಗುಸು ಗುಸು ಸಹ ಈಗ ನಿನ್ನೆಯ ಘಟನೆ ನಂತರ ದಟ್ಟವಾಗಿ ಕೇಳಿ ಬರಲಾರಂಬಿಸಿದೆ.

 

ಹಲ್ಲೆಗೊಳಗಾಗಿ ಕಿಮ್ಸ್‌ಗೆ ದಾಖಲಾಗಿರುವ ರಾಮತೀರ್ಥ

administrator

Related Articles

Leave a Reply

Your email address will not be published. Required fields are marked *