ಹುಬ್ಬಳ್ಳಿ-ಧಾರವಾಡ ಸುದ್ದಿ
ಸಹಾಯದ ನೆಪದಲ್ಲಿ ಅಪ್ರಾಪ್ತೆಯರಿಬ್ಬರ ಮೇಲೆ ಅತ್ಯಾಚಾರ

ಸಹಾಯದ ನೆಪದಲ್ಲಿ ಅಪ್ರಾಪ್ತೆಯರಿಬ್ಬರ ಮೇಲೆ ಅತ್ಯಾಚಾರ

ಇಬ್ಬರು ಅಂದರ್

ಹುಬ್ಬಳ್ಳಿ: ಹಾಸ್ಟೇಲ್ ಬಿಟ್ಟು ಬಂದ ಅಪ್ರಾಪ್ತೆಯಿಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಅವರಿಬ್ಬರ ಮೇಲೆ ಅತ್ಯಾಚಾರವೆಸಗಿದ ನಗರದ ಇಬ್ಬರನ್ನು ಉಪನಗರ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಹಾಗೂ ಕುಮಟಾ ಮೂಲದವರೆನ್ನಲಾದ ಅಭಿಷೇಕ್(27), ಪ್ರವೀಣ (25) ಅತ್ಯಾಚಾರ ಎಸಗಿದ ಯುವಕರಾಗಿದ್ದು,ಇಬ್ಬರನ್ನೂ ನ್ಯಾಯಾಂಗವಶಕ್ಕೆ ಒಪ್ಪಿಸಲಾಗಿದೆ.
ನೆರೆಯ ಜಿಲ್ಲೆಯ ಚನ್ನಮ ವಸತಿ ಶಾಲೆಯ ವಿದ್ಯಾರ್ಥಿನಿಯರಿಬ್ಬರು ಕಳೆದ 28ರಂದು ಹೇಳದೇ ಕೇಳದೇ ಹುಬ್ಬಳ್ಳಿಗೆ ಬಂದು ದೇಶಪಾಂಡೆನಗರದಲ್ಲಿ ಸುತ್ತಾಡುತ್ತಿದ್ದಾಗ ಎನ್ ಸಿಎಂ ನಲ್ಲಿ ಪಾನ್ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ ಹಾಗೂ ಪ್ರವೀಣ ಇವರ ಬಳಿ ವಿಳಾಸ ಕೇಳಿದಾಗ ಅವರ ಸಲುಗೆ ಬೆಳೆಸಿ ಊರಿಗೆ ಸುರಕ್ಷಿತವಾಗಿ ತಲುಪಿಸುವ ಭರವಸೆ ನೀಡಿ ಅವರ ಮೇಲೆ ಅತ್ಯಾಚಾರವೆಸಗಿದ್ದಾರೆ.
ಈ ಅಪ್ರಾಪ್ತ ಬಾಲಕಿಯರನ್ನು ಎರಡು ದಿನಗಳ ಕಾಲ ಗದಗ, ಹಾವೇರಿಯ ಪಾರ್ಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುತ್ತಾಡಿಸಿ ತಮ್ಮ ಕಾಮದಾಹಕ್ಕೆ ಬಳಸಿಕೊಂಡು ಹೀನ ಕೃತ್ಯ ಎಸಗಿದ್ದಾರೆ.
ಈ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾದ ಕುರಿತು ಕೊಪ್ಪಳದಲ್ಲಿ ಪ್ರಕರಣ ದಾಖಲಾಗಿತ್ತು.
ಹೀಗಿರುವಾಗಲೇ ಅಪ್ರಾಪ್ತೆಯೋರ್ವಳೂ ಅತ್ಯಾಚಾರ ನಡೆಸಿದವನೊಬ್ಬನ ಫೋನ್ ಬಳಸಿ ತನ್ನ ಕುಟುಂಬಸ್ಥರಿಗೆ ಘಟನೆಯ ವಿವರ ತಿಳಿಸಿ ಉಪನಗರ ಠಾಣೆಯ ಬಾಗಿಲು ತಟ್ಟಿದ್ದಾರೆ. ಅಷ್ಟರಲ್ಲಿ ಅಭಿಷೇಕ್ ಹಾಗೂ ಪ್ರವೀಣ ಊರು ಬಿಟ್ಟಿದ್ದಾರೆ. ಘಟನೆಯ ಗಂಭೀರತೆ ಅರಿತ ಉಪನಗರ ಠಾಣೆಯ ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ. ಹಾಗೂ ತಂಡ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ ಬಾಲಕಿಯರನ್ನು ರಕ್ಷಿಸಿ, ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.

 

administrator

Related Articles

Leave a Reply

Your email address will not be published. Required fields are marked *