ಹುಬ್ಬಳ್ಳಿ-ಧಾರವಾಡ ಸುದ್ದಿ
ಜಮೀನು ನೋಂದಣಿ : ಮಾಜಿ ತಾ.ಪಂ. ಸದಸ್ಯನಿಂದ ವಂಚನೆ

ಜಮೀನು ನೋಂದಣಿ : ಮಾಜಿ ತಾ.ಪಂ. ಸದಸ್ಯನಿಂದ ವಂಚನೆ

ಧಾರವಾಡ : ರೈತರೊಬ್ಬರ ಜಮೀನನ್ನು ನಂಬಿಸಿ ಖರೀದಿ ನೋಂದಣಿ ಮಾಡಿಸಿ ವಂಚಿಸಿದ ಪ್ರಕರಣ ತಾಲೂಕಿನ ಗರಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತಾಲೂಕಿನ ಶಿಂಗನಹಳ್ಳಿ ಗ್ರಾಮದ ಮಾಜಿ ತಾಲೂಕ ಪಂಚಾಯತ ಸದಸ್ಯ ಮಹದೇವ ಅಡಿವೆಪ್ಪ ದಂಡಿನ ಮತ್ತು ಇತರ ಇಬ್ಬರು ಸೇರಿ ವಂಚಿಸಿದವರಾಗಿದ್ದು, ಹಂಗರಕಿ ಗ್ರಾಮದ ನಾಗಪ್ಪ ಭೀಮಪ್ಪ ಸೊಗಲದ ಎಂಬುವರು ವಂಚನೆಗೊಳಗಾದವರಾಗಿದ್ದಾರೆ.

ಸೊಗಲದ ಅವರ 15 ಎಕರೆ ಜಮೀನನಲ್ಲಿ ಪವನ ವಿದ್ಯುತ್ ಅಳವಡಿಸಲು ಒಪ್ಪಿಗೆ ಪಡೆದು ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಕರಾರು ಪತ್ರ ನೋಂದಣಿ ಮಾಡಿಸು ವುದಾಗಿ ಹೇಳಿ ಮುಂಬೈ ಮೊಲದ ವ್ಯಕ್ತಿ ಒಬ್ಬರಿಗೆ ಖರೀದಿ ನೋಂದಣಿ ಮಾಡಿಸಿ ವಂಚಿಸಿದ್ದಾರೆ.
ಬಳಿಕ ಈ ವಿಷಯ ರೈತ ನಾಗಪ್ಪ ಸೊಗಲದಗೆ ಗೊತ್ತಾಗಿ ಮಹದೇವ ದಂಡಿನ ಅವರಿಗೆ ವಿಚಾರಿಸಿದಾಗ ತಮಗೆ ಏನೂ ಗೊತ್ತಿಲ್ಲ ಎಂದು ಹೇಳಿ ಕಳಿಸಿದ್ದಾರೆ. ಇದರಿಂದ ಬೇಸತ್ತ ರೈತ ನಾಗಪ್ಪ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *