ಹುಬ್ಬಳ್ಳಿ-ಧಾರವಾಡ ಸುದ್ದಿ
ಸಾಮೂಹಿಕ ಅತ್ಯಾಚಾರ: ಐವರು ಅಂದರ್;  ಇನ್ನೂ ಮೂವರಿಗಾಗಿ ತಲಾಷ್

ಸಾಮೂಹಿಕ ಅತ್ಯಾಚಾರ: ಐವರು ಅಂದರ್; ಇನ್ನೂ ಮೂವರಿಗಾಗಿ ತಲಾಷ್

ಧಾರವಾಡ : ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಶಹರ ಠಾಣೆಯ ಪೊಲೀಸರು ಐವರು ಯುವಕರನ್ನು ಬಂಧಿಸಿ ಕಂಬಿಯ ಹಿಂದೆ ಕಳಿಸುವುಲ್ಲಿ ಯಶಸ್ವಿಯಾಗಿದ್ದಾರೆ.
ಈ ಮಧ್ಯೆ ಪ್ರಕರಣದಲ್ಲಿ ಇನ್ನೂ ಮೂವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದು, ಅವರ ಪತ್ತೆ ಕಾರ್ಯ ಕೈಕೊಂಡಿದ್ದಾರೆ.
ಇಲ್ಲಿನ ಲಕ್ಷ್ಮೀಸಿಂಗನಕೇರಿಯ ಅಪ್ರಾಪ್ತಳ ಮೇಲೆ ಅದೇ ಬಡಾವಣೆಯ ಅಪ್ರಾಪ್ತ ಯುವಕರು ನಗರದ ಹೊರವಲಯಕ್ಕೆ ಒತ್ತಾಯದಿಂದ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆನ್ನಲಾಗಿದೆ. ಅಲ್ಲದೇ ಮೊಬೈಲ್‌ನಿಂದ ವಿಡಿಯೋ ಕೂಡ ಮಾಡಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿತ್ತು.
ಅತ್ಯಾಚಾರ ಪ್ರಕರಣವನ್ನು ಎಸಿಪಿ ಅನುಷಾ ಜಿ ಮತ್ತು ಸಿಪಿಐ ಸಂಗಮೇಶ ದಿಡಿಗಿನಾಳ ಗಂಭೀರವಾಗಿ ಪರಿಗಣಿಸಿ ತನಿಖೆ ಕೈಕೊಂಡಿದ್ದರು. ಹಲವರನ್ನು ವಶಕ್ಕೆ ಪಡೆದು ಕುಕೃತ್ಯದ ಬಗ್ಗೆ ಆರೋಪಿಗಳ ಬಾಯಿಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಶಾಮೀಲಾಗಿರುವ ಅನುಮಾನ ಪೊಲೀಸರದ್ದು. ಈ ಹಿನ್ನಲೆಯಲ್ಲಿ ಸಿಸಿಬಿ ಪಿಐಗಳಾದ ಕುಂಬಾರ ಮತ್ತು ಅಪ್ತಾಬ್ ಮುಲ್ಲಾ ಅವರನ್ನೊಳಗೊಂಡ ತಂಡ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಿಗೆ ತರೆಳಿವೆ ಎಂದು ಗೊತ್ತಾಗಿದೆ.
ಪ್ರಕರಣದಲ್ಲಿ ಲಕ್ಷ್ಮಿಸಿಂಗನಕೆರೆಯ ಬಡ್ಡಿಕುಳವೊಂದರ ಪುತ್ರ ಸಹ ಪ್ರಮುಖ ಆರೋಪಿಯಾಗಿದ್ದಾನೆನ್ನಲಾಗಿದೆ.

administrator

Related Articles

Leave a Reply

Your email address will not be published. Required fields are marked *